Advertisement

32 ಸಾಧಕರಿಗೆ ಜಾನಪದ ಅಕಾಡೆಮಿ ಪ್ರಶಸ್ತಿ

07:25 AM Dec 12, 2017 | |

ಬೆಂಗಳೂರು: 2017-18ನೇ ಸಾಲಿನ ಕರ್ನಾಟಕ ಜಾನಪದ ಅಕಾಡೆಮಿಯ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ನೆಲ್ಲಿಕಾರ ಗ್ರಾಮದ ಸರಿಪಾಡಾªನ ಕಲಾವಿದೆ ಲೀಲಾ ಶೆಡ್ತಿ, ಉಡುಪಿ ಜಿಲ್ಲೆ ಹಿರಿಯಡ್ಕದ ಗುಡ್ಡೆಯಂಗಡಿ ಗ್ರಾಮದ ಕೊರಗರ ಡೋಲು ಕಲಾವಿದ ಗುರುವ ಡೋಲು ಸೇರಿ32 ಜನ ಕಲಾವಿದರು ಪ್ರಶಸ್ತಿಗೆ ಭಾಜನರಾಗಿದ್ದಾರೆ.

Advertisement

ಸೋಮವಾರ ಸುದ್ದಿಗೋಷ್ಠಿಯಲ್ಲಿ ಪ್ರಶಸ್ತಿ ಪುರಸ್ಕೃತರ ಹೆಸರನ್ನು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಬಿ.ಟಾಕಪ್ಪ ಕಣ್ಣೂರು ಪ್ರಕಟಿಸಿದರು. 

ರಾಮನಗರದ ಸುಪ್ರಸಿದ್ಧ ಸೋಬಾನೆ ಪದ ಹಾಡುಗಾರ್ತಿ ಗಂಗನರಸಮ್ಮ, ಕೋಲಾರದ ಮಾವಳ್ಳಿ ಗ್ರಾಮದ ಮಾರಮ್ಮ, ದಾವಣಗೆರೆಯ ಜಾನಪದ ಕಲಾವಿದ ಜಿ.ಸಿದ್ಧನಗೌಡ, ತುಮಕೂರು ಜಿಲ್ಲೆಯ ವೀರಭದ್ರ ಕುಣಿತ ಕಲಾವಿದ ಕೆ.ಆರ್‌.ಹೊಸಳಯ್ಯ, ಬೆಂಗಳೂರು ನಗರದ ದಾಸರ ಪದ ಕಲಾವಿದ ಎಚ್‌.ಕೆ.ಪಾಪಣ್ಣ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಕೋಳೂರು ಗ್ರಾಮದ ಮದುವೆ ಹಾಡುಗಳ ಕಲಾವಿದೆ ಅಕ್ಕಯ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಸಾಂಪ್ರದಾಯಿಕ ಪದಗಳ‌ ಹಾಡುಗಳಿಗೆ ಖ್ಯಾತಿ ಪಡೆದಿರುವ ಚಿಕ್ಕಬಳ್ಳಾಪುರದ ಮಳ್ಳೂರು ಗ್ರಾಮದ ಶಾಂತಮ್ಮ, ಬಾಗಲಕೋಟೆಯ ಘಟನಟ್ಟಿ ಗ್ರಾಮದ ಸಾಬವ್ವ ಅಣ್ಣಪ್ಪ ಕೋಳಿ, ಕೊಪ್ಪಳದ ಹನುಮವ್ವ ವಾಲೀಕಾರ, ಕೋಲಾಟ ಪದಗಳ ಮೂಲಕ ಹೆಸರು ಮಾಡಿರುವ ಚಿತ್ರದುರ್ಗ ಜಿಲ್ಲೆಯ ಕಾಲ್ಕೆರೆ ಗ್ರಾಮದ ಡಿ.ತಿಮ್ಮಪ್ಪ, ಜನಪದ ವೈದ್ಯ ಶಿವಮೊಗ್ಗ ಜಿಲ್ಲೆಯ ಸಾಗರದ ಕೆ.ವಾಸುದೇವ, ಬುರ್ರಕಥೆಯ ಅಂದ ಕಲಾವಿದೆ ಸಂಡೂರು ತಾಲೂಕಿನ ಬುಡ್ಗ ಜಂಗಮ ಕಲಾಗ್ರಾಮದ ಶಿವಮ್ಮ, ಯಾದವಗಿರಿ ಜಿಲ್ಲೆಯ ಸುರಪುರ ತಾಲೂಕಿನ ಹೆಜ್ಜೆ ಕುಣಿತ ಕಲಾವಿದ ಶಿವಪ್ಪ ಹೆಬ್ಟಾಳ, ರಾಯಚೂರಿನ ರಾಮನತಾಳದ ತತ್ವಪದ ಕಲಾವಿದೆ ರುಕ್ಕವ್ವ ಜಾನಪದ ಅಕಾಡೆಮಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಬೀದರನ ಮೊಹರಂ ಪದ ಕಲಾವಿದ ನಾಗಪ್ಪ ಕಾಶಂಪೂರ, ಕಲಬುರಗಿಯ ಗೀಗಿಪದ ಕಲಾವಿದ ಇಸ್ಮಾಯಿಲ್‌ ಸಾಬ್‌, ಬಾಗಲಕೋಟೆಯ ಜಕ್ಕವ್ವ ಸತ್ಯಪ್ಪ ಮಾದರ, ಗೀಗಿ ಭಜನೆಯ ಹಾಡುಗಾರ ಧಾರವಾಡದ ವೀರಭದ್ರಪ್ಪ ಯ.ಮಳ್ಳೂರ, ವಿಜಯಪುರದ ಸಾಲೋಟಿಯ ಜಗದೇವ ಗೊಳವ್ವ ಮಾಡ್ಯಾಳ, ಹಾವೇರಿಯ ಪುರವಂತಿಕೆ ಕಲಾವಿದ ಮಹಾರುದ್ರಪ್ಪ ವೀರಪ್ಪ ಇಟಗಿ, ಡೊಳ್ಳಿನ ಪದದ ಕಲಾವಿದ ಗದಗ್‌ನ ಡೋಣಿ ಗ್ರಾಮದ ರಾಮಪ್ಪ ದ್ಯಾಮಪ್ಪ ಕೊರವ, ಉತ್ತರ ಕನ್ನಡ ಜಿಲ್ಲೆಯ ಗೊಂಡರ ಢಕ್ಕೆ ಕುಣಿತ ಕಲಾವಿದ ಸೋಮಯ್ಯ ಸಣ್ಣಗೊಂಡ, ಮೈಸೂರಿನ ಬೀಸು ಕಂಸಾಳೆ ಕಲಾವಿದ ಪುಟ್ಟಸ್ವಾಮಿ, ಚಿಕ್ಕಮಗಳೂರಿನ ಚೌಡಕಿ ಪದದ ಹಾಡುಗಾರ ಎಸ್‌.ಜಿ.ಜಯಣ್ಣ, ಮಂಡ್ಯದ ಗಾರುಡಿ ಗೊಂಬೆ ಕಲಾವಿದ ಕೃಷ್ಣೇಗೌಡ, ಚಾಮರಾಜನಗರದ ನೀಲಗಾರರ ಕಾವ್ಯ ಕಲಾವಿದ ಸಣ್ಣಶೆಟ್ಟಿ, ಹಾಸನದ ಭಜನೆ ಕಲಾವಿದೆ ಲಕ್ಷ್ಮಮ್ಮ, ಕೊಡಗಿನ ಉಮ್ಮತ್ತಾಟ್‌ ಕಲಾವಿದೆ ರಾಣಿಮಾಚಯ್ಯ ಈ ಸಾಲಿನ ಜಾನಪದ ಅಕಾಡೆಮಿಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.

Advertisement

ಈ ಸಾಲಿನ ಡಾ.ಜಿಶಂಪ ತಜ್ಞ ಪ್ರಶಸ್ತಿಗೆ ಶಿವಮೊಗ್ಗ ಜಿಲ್ಲೆಯ ಸಾಗರದ ಎನ್‌.ಹುಚ್ಚಪ್ಪ ಮಾಸ್ತರ್‌ ಮತ್ತು ಡಾ.ಬಿ.ಎಸ್‌.ಗದ್ದಗಿಮs…, ತಜ್ಞ ಪ್ರಶಸ್ತಿಗೆ ಧಾರವಾಡದ ಶಾಲಿನಿ ರಘುನಾಥ್‌ ಆಯ್ಕೆಯಾಗಿದ್ದಾರೆ ಎಂದು ಟಾಕಪ್ಪ ತಿಳಿಸಿದರು.

ಸಾಗರದಲ್ಲಿ ಪ್ರಶಸ್ತಿ ಪ್ರದಾನ
ಪ್ರಶಸ್ತಿಗಳಲ್ಲಿ ಎರಡು ವಿಧಗಳಿದ್ದು, ಕಲಾ ಪ್ರಕಾರದ ಪ್ರಶಸ್ತಿಗೆ ಆಯ್ಕೆಯಾಗಿರುವ ಕಲಾವಿದರಿಗೆ 25 ಸಾವಿರ ರೂ. ನಗದು ಮತ್ತು ಸ್ಮರಣಿಕೆ ಮತ್ತು ತಜ್ಞ ಪ್ರಶಸ್ತಿಗೆ ಆಯ್ಕೆಯಾದ ಕಲಾವಿದರಿಗೆ 50 ಸಾವಿರ ನಗದು ಮತ್ತು ಸ್ಮರಣಿಕೆ ನೀಡಿ ಗೌರವಿಸಲಾಗುವುದು. ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಡಿ.28ರಿಂದ 29ರವರೆಗೆ ಹಮ್ಮಿಕೊಂಡಿರುವ ಜಾನಪದ ಸಂಭ್ರಮ ಕಾರ್ಯಕ್ರಮದಲ್ಲಿ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಬಿ.ಟಾಕಪ್ಪ ಕಣ್ಣೂರು ತಿಳಿಸಿದರು. ಸರ್ಕಾರ ಕಲಾವಿದರಿಗೆ ಈಗ ನೀಡುತ್ತಿರುವ ಮಾಸಾಶನ ಸಾಲುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕಲಾವಿದರ ಮಾಸಾಶನವನ್ನು 4,500 ರೂ.ಗೆ ಏರಿಕೆ ಮಾಡುವಂತೆ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next