Advertisement

ಕರಾವಳಿಯಲ್ಲಿ ಮಂಜು ಮುಸುಕಿದ ವಾತಾವರಣ

11:51 AM Dec 28, 2021 | Team Udayavani |

ಕಾಪು: ಕರಾವಳಿಯಲ್ಲಿ ಮಂಗಳವಾರ ಮುಂಜಾನೆ ಮಂಜು ಮುಸುಕಿದ ವಾತಾವರಣ ಕಂಡು ಬಂದಿದೆ.

Advertisement

ಈ ಬಾರಿ ಎಲ್ಲೆಡೆ ಚಳಿಯ ವಾತಾವರಣ ಹೆಚ್ಚಾಗಿದ್ದು ಚಳಿಯ ಕಾರಣದಿಂದಾಗಿ ಎಲ್ಲೆಡೆ ಮಂಜು ಮುಸುಕಿದ ವಾತಾವರಣ ಕಂಡು ಬಂದಿದೆ.

ನಗರ ಮತ್ತು ಗ್ರಾಮೀಣ ಪ್ರದೇಶದ ಎಲ್ಲೆಡೆ ಮಂಜು ಮುಸುಕಿದ ವಾತಾವರಣ ಕಂಡು ಬಂದಿದ್ದು ವಾಹನ ಸವಾರಿಗಳಿಗೆ ಸಂಚಾರಕ್ಕೆ ತೊಡಕುಂಟಾಗಿದೆ.

ಸೂರ್ಯೋದಯದ ವೇಳೆಯಲ್ಲಿ  ಕಾಣಿಸಿಕೊಂಡ ಮಂಜು ಮುಸುಕಿದ ವಾತಾವರಣದಿಂದಾಗಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ವಾಹನ ಸಂಚಾರಕ್ಕೂ ಅಡತಡೆಯುಂಟಾಯಿತು.

ಎಲ್ಲೆಡೆ ಮಂಜು ಮುಸುಕಿದ ಕಾಣಿಸಿ ಕೊಂಡಿರುವುದರಿಂದ ಹೂ ಬಿಟ್ಟಿರುವ ಮಾವು, ಹಲಸು, ಗೇರು ಸಹಿತ ವಿವಿಧ ಬೆಳೆಗಳಿಗೆ ಮಾರಕವಾಗಲಿದ್ದು ಪ್ರಾಕೃತಿಕ ವೈಪರೀತ್ಯಕ್ಕೂ‌ ಕಾರಣವಾಗುವ ಸಾಧ್ಯತೆಗಳಿವೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next