Advertisement

ಫ್ಲೈ ಬಸ್‌ ಸೇವೆಗೆ ಚಾಲನೆ

06:20 AM Jan 09, 2018 | |

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ರಾಜ್ಯದ ಬೇರೆ ನಗರಗಳಿಗೆ “ಫ್ಲೈ ಬಸ್‌’ ಸೇವೆ ಆರಂಭಿಸಿದ್ದ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ, ಅದನ್ನು ಈಗ ಮಡಿಕೇರಿ ಹಾಗೂ ನೆರೆ ರಾಜ್ಯ ತಮಿಳುನಾಡಿಗೂ ವಿಸ್ತರಿಸಿದೆ. 

Advertisement

ಈವರೆಗೆ ಮೈಸೂರು ಮತ್ತು ಕುಂದಾಪುರಕ್ಕೆ ಮಾತ್ರ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಫ್ಲೈ ಬಸ್‌ ಸೇವೆ ಇತ್ತು. ಈಗ ರಾಜ್ಯದ ಮಡಿಕೇರಿ ಹಾಗೂ ತಮಿಳುನಾಡಿನ ಸೇಲಂಗೆ ನೂತನ ಫ್ಲೈ ಬಸ್‌ ಸೇವೆಗೆ ಸೋಮವಾರ ಸಾರಿಗೆ ಸಚಿವ ಎಚ್‌.ಎಂ. ರೇವಣ್ಣ ಚಾಲನೆ ನೀಡಿದರು. 

ಈ ಸಂದರ್ಭದಲ್ಲಿ ಕೆಐಎಎಲ್‌ ಸಹಾಯಕ ಉಪಾಧ್ಯಕ್ಷ ಎಚ್‌. ಆರ್‌. ವೆಂಕಟರಾಮನ್‌ ಮತ್ತಿತರರು ಉಪಸ್ಥಿತರಿದ್ದರು. ವಿಮಾನ ನಿಲ್ದಾಣದಿಂದ ನಿತ್ಯ ಮಡಿಕೇರಿಗೆ ಒಂದು ಮತ್ತು ಸೇಲಂಗೆ ಎರಡು ಬಸ್‌ಗಳು ಕಾರ್ಯಾಚರಣೆ ಮಾಡಲಿವೆ.

Advertisement

Udayavani is now on Telegram. Click here to join our channel and stay updated with the latest news.

Next