Advertisement

ಸ್ವಚ್ಛಗೊಂಡ ಫ್ಲೈಓವರ್‌ ಅಡಿ

01:50 AM Dec 11, 2018 | Team Udayavani |

ಕುಂದಾಪುರ: ಸ್ವಚ್ಛ ಪುರಸಭೆಗೆ ಅಪವಾದ ಎಂಬಂತೆ ಇಲ್ಲಿನ ಶಾಸ್ತ್ರಿ ಸರ್ಕಲ್‌ ಬಳಿಯ ಶೆರೋನ್‌, ಶೆಲೊಮ್‌ ಹೋಟೆಲ್‌ ಎದುರು ಫ್ಲೈ ಓವರ್‌ ಅಡಿ ರೋಗ ರುಜಿನಗಳ ಉತ್ಪಾದನಾ ತಾಣವಾಗಿದ್ದ ಕೊಳಚೆಗೆ ಮುಕ್ತಿ ದೊರೆತಿದೆ. ಸಂಗ್ರಹಗೊಂಡಿದ್ದ ಕೊಳಚೆ ನೀರನ್ನು ಶುಚಿಗೊಳಿಸಿ ಕಾಂಕ್ರಿಟ್‌ ಚರಂಡಿ ವ್ಯವಸ್ಥೆಯನ್ನು ಸರಿಪಡಿಸಲಾಗಿದೆ.

Advertisement

ಫ್ಲೈ ಓವರ್‌ ಅಡಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಸುವವರು ಒಂದಷ್ಟು ಸಾಮಾಗ್ರಿಗಳನ್ನು ರಾಶಿ ಹಾಕಿದ್ದಾರೆ. ಕಾರ್ಮಿಕರು ಅಲ್ಲೇ ಬಿಡಾರ ಮಾಡಿದ್ದಾರೆ. ಅವರ ಶೌಚ, ಸ್ನಾನಗೃಹಗಳೂ ಅಲ್ಲೇ ಇವೆ. ಅದರ ಕೊಳಚೆ ನೀರು ತೆರೆದ ಚರಂಡಿಯಂತೆ ಫ್ಲೈಓವರ್‌ ಅಡಿಯಲ್ಲಿ ಸಂಗ್ರಹವಾಗಿದೆ. ಮಳೆಗಾಲದಲ್ಲಿ ಕೂಡ ಇಲ್ಲಿ ನೀರು ಸಂಗ್ರಹ ಆಗುತ್ತಿತ್ತು. ಈಗ ಗಬ್ಬು ನಾರುವ ತ್ಯಾಜ್ಯ ನೀರು ಸಂಗ್ರಹವಾಗತೊಡಗಿದೆ. ಸಂಗ್ರಹವಾದ ತ್ಯಾಜ್ಯ ನೀರು ಹೊರ ಹೋಗದಂತೆ ಸರ್ವೀಸ್‌ ರಸ್ತೆ ಕಾಮಗಾರಿ ಮಾಡಲಾಗಿದೆ. ಈ ಕುರಿತು ಉದಯವಾಣಿ ವರದಿ ಪ್ರಕಟಿಸಿತ್ತು. ಇದೀಗ ವರದಿಗೆ ಸ್ಪಂದಿಸಿದ ಪುರಸಭೆ ಹಾಗೂ ರಾಷ್ಟ್ರೀಯ ಹೆದ್ದಾರಿ ಗುತ್ತಿಗೆದಾರ ನವಯುಗ ಸಂಸ್ಥೆ ಸ್ವಚ್ಛತೆಗೆ ಆದ್ಯತೆ ನೀಡಿದೆ. ಆದರೆ ಬೀಡುಬಿಟ್ಟ ಕಾರ್ಮಿಕರಿಗೆ ಇನ್ನೂ ಶೌಚ, ಸ್ನಾನದ ಮನೆಯ ವ್ಯವಸ್ಥೆಯಾಗಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next