Advertisement

Mudhol: ನೀರಿನ‌ ಹೊಡೆತಕ್ಕೆ‌ ಕಿತ್ತು ಹೋದ ಡಾಂಬರ್ ರಸ್ತೆ… ವಾಹನ ಸವಾರರ ಪರದಾಟ

03:27 PM Aug 09, 2024 | Team Udayavani |

ಮುಧೋಳ: ಘಟಪ್ರಭಾ ಪ್ರವಾಹ ತಗ್ಗಿದ್ದರೂ ನದಿಯ ಅಬ್ಬರಕ್ಕೆ ಹತ್ತಾರು ಅವಾಂತರಗಳು ಸೃಷ್ಠಿಯಾಗಿವೆ.

Advertisement

ತಾಲೂಕಿನ ಮಾಚಕನೂರ ಗ್ರಾಮದ ಬ್ರಿಜ್ ಕಂ ಬ್ಯಾರೇಜ್ ಮೇಲೆ ನೀರು ಹರಿದ ರಭಸಕ್ಕೆ ಡಾಂಬರ್ ರಸ್ತೆ ಕಿತ್ತುಹೋಗಿದ್ದು ಈ ರಸ್ತೆಯಲ್ಲಿ ಓಡಾಡುವ ವಾಹನ ಸವಾರರು ಪ್ರಯಾಸ ಪಡುವಂತಾಗಿದೆ.

ಚಿಕ್ಕೂರ-ಮಾಚಕನೂರ ಗ್ರಾಮಕ್ಕೆ ಸಂಪರ್ಕ‌‌ ಕಲ್ಪಿಸುವ ಬ್ರಿಜ್ ಕಂ ಬ್ಯಾರೇಜ್ ಘಟಪ್ರಭಾ ನದಿಯಲ್ಲಿ‌ ಮುಳುಗಡೆಯಾಗಿತ್ತು. ಇದೀಗ ನದಿಯ ನೀರು ಇಳಿಮುಖವಾಗಿದ್ದು ಬ್ರಿಜ್ ಕಂ ಬ್ಯಾರೇಜ್ ಬಳಿಯಲ್ಲಿ ರಸ್ತೆಯಲ್ಲಿನ‌ ಡಾಂಬರ್ ಸಂಪೂರ್ಣ ಕಿತ್ತು ಹೋಗಿದೆ. ಈ ಮಾರ್ಗದಲ್ಲಿ ಓಡಾಡುವ ವಾಹನ ಸವಾರರಿಗೆ ಹೆಚ್ಚಿನ ತೊಂದರೆಯುಂಟಾಗಿದೆ.

ಸಂಬಂಧಿಸಿದ‌ ಅಧಿಕಾರಿಗಳು ಶೀಘ್ರವೇ ರಸ್ತೆ ದುರಸ್ಥಿಗೊಳಿಸಿ ಸವಾರರಿಗೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: Bengaluru: ʼಕೆಲಸಕ್ಕೆ ಹೋಗು’ ಎಂದಿದ್ದಕ್ಕೆ ತಮ್ಮನನ್ನೇ ಕೊಂದ ಅಣ್ಣ!

Advertisement

Advertisement

Udayavani is now on Telegram. Click here to join our channel and stay updated with the latest news.

Next