Advertisement

ಮಳೆಗೆ ಕೊಚ್ಚಿಹೋಗಿದ್ದ ಬೈಕ್ ಸವಾರರು: ನಾಲ್ಕು ಗಂಟೆ ಮರದ ಟೊಂಗೆಯಲ್ಲಿ ಕಳೆದರು 

09:49 AM Oct 22, 2019 | Team Udayavani |

ಹಾವೇರಿ: ಜಲ್ಲೆಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ತಾಲೂಕಿನ ಅಗಡಿ ಹಳ್ಳ ತುಂಬಿ ಹರಿಯುತ್ತಿದೆ. ಹಳ್ಳದ ನೀರು ರಸ್ತೆ ಮೇಲೆ ಹರಿಯುತ್ತಿರುವ ಕಾರಣ ದಾರಿ ಕಾಣದೆ ಕೊಚ್ಚಿಹೋಗಿದ್ದ ಮೂವರು ಬೈಕ್ ಸವಾರರನ್ನು ರಕ್ಷಿಸಲಾಗಿದೆ.

Advertisement

ಆದರೆ ಕೊಚ್ಚಿ ಹೋಗಿದ್ದ ಈ ಸವಾರರು ಅಲ್ಲೆ ಇದ್ದ ಗಿಡದ ಟೊಂಗೆಯನ್ನು ಹಿಡಿದು ಕುಳಿತು ರಕ್ಷಣೆ ಪಡೆದಿದ್ದರು.

ಹಾವೇರಿ ತಾಲ್ಲೂಕಿನ ಬೊಮ್ಮನಕಟ್ಟಿ ಗ್ರಾಮದ ಸಂಗಯ್ಯ ಬಸಯ್ಯ ಹಿರೇಮಠ, ನೇತ್ರಾವತಿ ಹಿರೇಮಠ, ಸೀತಾಬಾಯಿ ನಾಯಕ ಕೊಚ್ಚಿಹೊಗಿದ್ದ ಸವಾರರು

ಅದೇ ಮಾರ್ಗವಾಗಿ ಸಂಚರಿಸುತ್ತಿದ್ದ ಕೆಎಸ್ಆರ್ ಟಿ ಸಿ ಬಸ್ಸು ಚಾಲಕ ಪ್ರಯಾಣಿಕರ ಸಹಾಯದಿಂದ ರಕ್ಷಣೆಗೆ ಸಹಾಯ ಮಾಡಿದರು. ಕೊಚ್ಚಿ ಹೋದ ನಾಲ್ಕು ಗಂಟೆಗಳ ನಂತರ ಅಗ್ನಿಶಾಮಕ ದಳ, ಪೊಲೀಸ್ ಸಿಬ್ಬಂದಿ, ಜನರ ಸಹಾಯದಿಂದ ರಕ್ಷಣೆ ಮಾಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next