Advertisement

ಸಾವಯವ ಸಂತೆಯಲ್ಲಿ ಜನಜಂಗುಳಿ

01:12 PM Jul 02, 2018 | Team Udayavani |

ಹಾಸನ: ನಗರದ ಆರ್‌.ಸಿ.ರಸ್ತೆ ಎನ್‌.ಸಿ.ಸಿ. ಕಚೇರಿ ಮುಂಭಾಗ ಭಾನುವಾರ ಬೆಳಗ್ಗೆ ನಡೆದ ಸಾವಯವ ಸಂತೆಯಲ್ಲಿ ಗ್ರಾಹಕರು ಮುಗಿ ಬಿದ್ದು ಉತ್ಪನ್ನ ಖರೀದಿಸಿದರು.

Advertisement

ಸ್ವದೇಶಿ ಜಾಗರಣ ಮಂಚ್‌, ಅವನಿ ಆರ್ಗ್ಯಾನಿಕ್‌ ಮತ್ತು ಭಾರತೀಯ ಕಿಸಾನ್‌ ಸಂಘ ಜಂಟಿಯಾಗಿ ಪ್ರತಿ ತಿಂಗಳು ಮೊದಲ ಭಾನುವಾರ ಸಾವಯವ ಸಂತೆ ನಡೆಸಲಾಗುತ್ತಿದೆ. ಈ ಭಾನುವಾರ 50ಕ್ಕೂ ಹೆಚ್ಚು ರೈತರು ತಮ್ಮ ಸಾವಯವ ಉತ್ಪನ್ನಗಳನ್ನು ತಂದು ಮಾರಾಟ ಮಾಡಿದರು. ಬೆಳಗ್ಗೆ 8 ಗಂಟೆಗೆ ಪ್ರಾರಂಭವಾದ ಸಂತೆಯಲ್ಲಿ 9.30ರ ವೇಳೆಗೆ ಉತ್ಪನ್ನಗಳು ಬಹುತೇಕ ಖಾಲಿಯಾಗಿದ್ದವು. ಗ್ರಾಹಕರ ಪ್ರತಿಕ್ರಿಯೆ ಕಂಡ ಸಂತೆಯ ಆಯೋಜಕ ಜಯಪ್ರಕಾಶ್‌ ಸಂತಸ ವ್ಯಕ್ತಪಡಿಸಿದರು.

ಸಾವಯವ ಪದಾರ್ಥಕ್ಕೆ ಬೇಡಿಕೆ ಇದ್ದರೂ ಬೆಳೆಗಾರರ ಕೊರತೆ ಇದೆ ಎಂದು ಇದೆ ಹೇಳಿದರು. ಈ ಸಂದರ್ಭದಲ್ಲಿ ಶಾಸಕ ಪ್ರೀತಂಜೆ.ಗೌಡ ಸಾವಯವ ಸಂತೆಗೆ ಬಂದು ವ್ಯಾಪಾರ ಮಾಡುವುದರ ಮೂಲಕ ಗಮನ ಸೆಳೆದು ಜನರಲ್ಲಿ ಜಾಗೃತಿ ಮೂಡಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next