Advertisement

ಅಪಾಯ ಸಂಭವಿಸುವ ಮುನ್ನವೇ ಕಾಂಪೌಂಡ್‌ ಸರಿಪಡಿಸಿ

04:26 PM Aug 03, 2019 | Team Udayavani |

ಮುಳಬಾಗಿಲು: ನಗರದಲ್ಲಿರುವ ಪಶು ವೈದ್ಯ ಆಸ್ಪತ್ರೆ ಮತ್ತು ಸಹಾಯಕ ನಿರ್ದೇಶಕರ ಕಚೇರಿಗೆ ಹಾಕಿರುವ ಕಾಂಪೌಂಡ್‌ ಸಂಪೂರ್ಣ ಶಿಥಿಲಗೊಂಡಿದ್ದು, ಅವಘಡ ಸಂಭವಿಸುವ ಮುನ್ನಾ ತೆರವು ಮಾಡಿ ಹೊಸದಾಗಿ ನಿರ್ಮಿಸಬೇಕಿದೆ.

Advertisement

ನಗರದಲ್ಲಿ ಆಲಂಗೂರು ಪಿ.ಚಂಗೇಗೌಡರು ದಾನ ಮಾಡಿದ್ದ ಸ್ಥಳದಲ್ಲಿ 1940ರಲ್ಲಿ ಪಶು ವೈದ್ಯ ಆಸ್ಪತ್ರೆ ನಿರ್ಮಿಸಲಾಗಿತ್ತು. ಸದ್ಯ ಸಹಾಯಕ ನಿರ್ದೇಶಕರು, ನಾಲ್ವರು ಪಶು ವೈದ್ಯರು ಹಾಗೂ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದರಿಂದ ತಾಲೂಕಿನ ರೈತರು, ನಗರದಲ್ಲಿ ಸಾಕಿರುವ ಪ್ರಾಣಿಗಳಿಗೆ ಚಿಕಿತ್ಸೆ ಕೊಡಿಸಲು ಸಾಕಷ್ಟು ಅನುಕೂಲವಾಗಿದೆ. ಹಳೇಯದಾದ ಕಟ್ಟಡಕ್ಕೆ ಹಾಕಿದ್ದ ನಾಮಫ‌ಲಕ ಕಿತ್ತುಹೋಗಿತ್ತು. 5 ವರ್ಷಗಳ ಹಿಂದೆ ಅಂದಿನ ಸಹಾಯಕ ನಿರ್ದೇಶಕ ಡಾ.ರಮಾನಂದ್‌ ಹೊಸದಾಗಿ ಹಾಕಿಸಿದ್ದರು. ಆದರೆ, ಶಿಥಿಲಗೊಂಡಿರುವ ಗೋಡೆ ಯಾರೂ ಸರಿಪಡಿಸುವ ಗೋಜಿಗೆ ಹೋಗಿಲ್ಲ.

ಕಲ್ಲು ತೆಗೆದರೆ ಬೀಳುತ್ತದೆ: ಕಚೇರಿ ರಕ್ಷಣೆ ದೃಷ್ಟಿಯಿಂದ ಹಾಕಿದ್ದ ಕಾಂಪೌಂಡ್‌ ಗೋಡೆ ಹಲವು ವರ್ಷಗಳಿಂದ ಬಿರುಕುಬಿಟ್ಟು, ಬಿದ್ದು ಹೋಗುವಂತಿದೆ. ಅಧಿಕಾರಿಗಳು ಅದನ್ನು ಸರಿಪಡಿಸುವ ಬದಲು, ಕಲ್ಲು ಚಪ್ಪಡಿ ಇಟ್ಟು ತಾತ್ಕಾಲಿಕವಾಗಿ ನಿಲ್ಲಿಸಿದ್ದಾರೆ. ಅನಾರೋಗ್ಯ, ವಿಮೆ ಹೀಗೆ ಹಲವು ಕಾರಣಗಳಿಗಾಗಿ ಜಾನುವಾರುಗಳನ್ನು ಇಲ್ಲಿಗೆ ರೈತರು ಕರೆದುಕೊಂಡು ಬರುತ್ತಾರೆ. ಒಂದು ವೇಳೆ ಕಾಂಪೌಂಡು ಪಕ್ಕದಲ್ಲಿ ನಡೆದು ಹೋಗಬೇಕಾದ್ರೆ, ಒರಗಿನಿಂತಾದ ಗೋಡೆ ಕುಸಿದರೆ ಅಪಾಯ ಕಟ್ಟಿಟ್ಟ ಬುತ್ತಿ.

ಗೇಟ್ ಅಳವಡಿಸಿರುವ ಜಾಗದಲ್ಲೇ ಗೋಡೆ ಸಂಪೂರ್ಣ ಶಿಥಿಲಗೊಂಡಿದೆ. ಕಲ್ಲು ಚಪ್ಪಡಿ ತೆಗೆದರೆ ಗೋಡೆ ಕೆಳಗೆ ಬೀಳುತ್ತದೆ. ಇದನ್ನು ನೋಡಿಕೊಂಡು ಓಡಾಡುವ ಪಶು ವೈದ್ಯರಾಗಲಿ, ಅಧಿಕಾರಿಗಳಾಗಲಿ ಗಮನ ಹರಿಸದಿರುವುದು ವಿಪರ್ಯಾಸ.

Advertisement

Udayavani is now on Telegram. Click here to join our channel and stay updated with the latest news.

Next