Advertisement

ಶಿವಸೇನೆ, ಕಾಂಗ್ರೆಸ್, ಎನ್.ಸಿ.ಪಿ. ಶಾಸಕರ ಪಂಚತಾರಾ ಪರೇಡ್ ; ಒಗ್ಗಟ್ಟು ಸಾರಿದ 162 ಶಾಸಕರು

09:54 AM Nov 26, 2019 | Hari Prasad |

ಮುಂಬಯಿ: ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಹುಮತ ಸಾಬೀತಿಗೆ ಸುಪ್ರೀಂಕೋರ್ಟಿನ ನಾಳೆಯ ತೀರ್ಪಿನ ನಿರೀಕ್ಷೆಯಲ್ಲಿರುವ ನಾಲ್ಕೂ ಪಕ್ಷಗಳಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸು ಪಡೆದುಕೊಂಡಿವೆ.

Advertisement

ಬಿಜೆಪಿ ಬಳಿಯಲ್ಲಿ ಸರಕಾರ ರಚಿಸುವಷ್ಟು ಅಗತ್ಯ ಶಾಸಕರ ಬಲ ಇಲ್ಲ ಎಂಬುದನ್ನು ಸಾಬೀತುಪಡಿಸಲು ಹಾಗೂ ನಮ್ಮ ಮೈತ್ರಿ ಅಬಾಧಿತವಾಗಿದೆ ಎಂಬುದನ್ನು ತೋರಿಸಲು ಇಂದು ಸಂಜೆ ಶಿವಸೇನೆ, ಕಾಂಗ್ರೆಸ್ ಹಾಗೂ ಎನ್.ಸಿ.ಪಿ. ಪಕ್ಷಗಳು ಇಲ್ಲಿನ ಪಂಚತಾರಾ ಹೊಟೇಲ್ ಗ್ರ್ಯಾಂಡ್ ಹೈಯಾತ್ ನಲ್ಲಿ ತಮ್ಮ ಒಟ್ಟು 162 ಶಾಸಕರನ್ನು ಮಾಧ್ಯಮಗಳ ಮುಂದೆ ಹಾಜರುಪಡಿಸುವ ಮೂಲಕ ಮಹಾರಾಷ್ಟ್ರದಲ್ಲಿ ಸರಕಾರ ರಚಿಸಲು ಅಗತ್ಯವಿರುವ ಬಹುಮತ ತಮ್ಮ ಬಳಿಯಲ್ಲೇ ಇದೆ ಎಂಬುದನ್ನು ಸಾರಿ ಹೇಳಿವೆ.


‘ನಾವು 162 ಮಂದಿ’ ಎಂಬ ಪೋಸ್ಟರ್ ಗಳು ಶಾಸಕರ ಬಲಪ್ರದರ್ಶನಕ್ಕೆ ಆಯ್ದುಕೊಳ್ಳಲಾಗಿದ್ದ ಕೋಣೆಯಲ್ಲಿ ರಾರಾಜಿಸುತ್ತಿತ್ತು. ಮತ್ತು ಈ ಸಭೆಯಲ್ಲಿ ಚುನಾವಣೋತ್ತರ ಮೈತ್ರಿ ನಡೆಸಿದ ಮೂರೂ ಪಕ್ಷಗಳ ಶಾಸಕರು ತಾವು ತಮ್ಮ ತಮ್ಮ ಪಕ್ಷಗಳಿಗೇ ನಿಷ್ಠರಾಗಿರುತ್ತೇವೆ ಎಂದು ಪ್ರಮಾಣ ಮಾಡಿದರು.

ಈ ಬೆಳವಣಿಗೆಗಳ ಬಳಿಕ ಇದೀಗ ಬಿಜೆಪಿ ಜೊತೆ ಏಕಾಏಕಿ ಮೈತ್ರಿ ಮಾಡಿಕೊಂಡಿರುವ ಅಜಿತ್ ಪವಾರ್ ಅವರು ಸದ್ಯದ ಪರಿಸ್ಥಿತಿಯಲ್ಲಿ ಏಕಾಂಗಿಯಾದಂತಾಗಿದೆ. ಆದರೆ ಈ ಎಲ್ಲಾ ನಿಗೂಢತೆಗಳಿಗೆ ನಾಳೆ ಸುಪ್ರೀಂಕೋರ್ಟಿನಲ್ಲಿ ಹೊರಬೀಳಲಿರುವ ತೀರ್ಪೊಂದೇ ಉತ್ತರ ನೀಡಲು ಶಕ್ತವಾಗಲಿದೆ ಎಂಬ ಅಭಿಪ್ರಾಯ ರಾಜಕೀಯ ಪಂಡಿತರದ್ದು.

ಸುಪ್ರೀಂಕೋರ್ಟ್ ನಾಳೆ ತನ್ನ ತೀರ್ಪಿನಲ್ಲಿ ಮಹಾರಾಷ್ಟ್ರ ವಿಧಾನಸಭೆಯಲ್ಲಿ ದೇವೇಂದ್ರ ಫಡ್ನವೀಸ್ ಅವರು ಯಾವಾಗ ವಿಶ್ವಾಸಮತ ಯಾಚನೆ ಮಾಡಬೇಕೆಂಬುದನ್ನು ಹೇಳುವ ನಿರೀಕ್ಷೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next