Advertisement
ಭಾನುವಾರ ಮಹಾರಾಷ್ಟ್ರದ ಘಾಟ್ಗಳನ್ನು ಸುತ್ತಾಡಲು ಹೋಗಿದ್ದ ಬೆಳಗಾವಿಯ ಪ್ರತಿಷ್ಠಿತ ಶ್ರೀ ಮಾತಾ ಸೊಸೈಟಿಯ ಅಂಗ ಸಂಸ್ಥೆಯಾದ ಭಕ್ತಿ ಸೊಸೈಟಿ ಸಿಬ್ಬಂದಿ ಶಿವಾಜಿನಗರದ ಪಂಕಜ ಉಫì ಜ್ಯೋತಿರ್ಲಿಂಗ ಸಂಪತ್ ಕಿಲ್ಲೇಕರ(30), ಬಾಳೇಕುಂದ್ರಿಯ ಮೋಹನ ಲಕ್ಷ್ಮಣ ರೇಡಕರ(40), ಜುನೆ ಬೆಳಗಾವಿಯ ಕಿಶನ್ ಮುಕುಂದ ಗಾವಡೆ(19), ಬೋಕನೂರ ಗ್ರಾಮದ ಯಲ್ಲಪ್ಪ ಪಾಟೀಲ(45) ಹಾಗೂ ಅಷ್ಟೇ ಗ್ರಾಮದ ನಾಗೇಂದ್ರ ಸಿದ್ದಪ್ಪ ಬಾಬುಗವಡೆ(29) ಮೃತಪಟ್ಟವರು.
ಮೃತದೇಹಗಳು ಕಾರಿನೊಳಗೆ ಸಿಕ್ಕಿ ಹಾಕಿಕೊಂಡಿದ್ದು, ಒಬ್ಬನ ಮೃತದೇಹ ಕಾರಿನಿಂದ ಸ್ವಲ್ಪ ದೂರದಲ್ಲಿ ಹಾಗೂ ಇನ್ನಿಬ್ಬರ ಮೃತದೇಹಗಳು ಕಾರಿನ ಹೊರ ಭಾಗದಲ್ಲಿ ಬಿದ್ದಿವೆ. ಚಂದಗಡ ಹಾಗೂ ಖಾನಾಪುರ ತಾಲೂಕಿನಾದ್ಯಂತ ಭಾರೀ ಮಳೆ ಸುರಿಯುತ್ತಿರುವುದರಿಂದ ಮೃತದೇಹಗಳನ್ನು ಕಾರಿನಿಂದ ತೆಗೆಯಲು ಹಾಗೂ ಪ್ರಪಾತದಿಂದ ಮೇಲಕ್ಕೆ ತರಲು ಅಡಚಣೆ ಉಂಟಾಗುತ್ತಿದೆ.ಕೊಲ್ಲಾಪುರ ಜಿಲ್ಲೆಯ ಚಂದಗಡ ಪೊಲೀಸರು ಸ್ಥಳಕ್ಕೆ ತೆರಳಿದ್ದು, ಕಾರ್ಯಾಚರಣೆ ನಡೆಸುತ್ತಿದ್ದಾರೆ.