Advertisement

ದಿಲ್ಲಿಯಲ್ಲಿ ಕಾರಿಗೆ ಡಂಪರ್‌ ಢಿಕ್ಕಿಯಾಗಿ ಐವರ ಸಾವು; ನಾಲ್ವರು ಗಂಭೀರ

10:55 AM Jul 26, 2017 | udayavani editorial |

ಹೊಸದಿಲ್ಲಿ : ಪೂರ್ವ ದಿಲ್ಲಿಯ ಕಲ್ಯಾಣಪುರಿಯಲ್ಲಿ ಇಂದು ನಸುಕಿನ 3 ಗಂಟೆಯ ವೇಳೆಗೆ ಕಾರಿಗೆ ಡಂಪರ್‌ ಢಿಕ್ಕಿಯಾಗಿ ಸಂಭವಿಸಿದ ಭೀಕರ ಅಪಘಾತದಲ್ಲಿ ಐವರು ಮಡಿದು ಇತರ ನಾಲ್ವರು ಗಂಭೀರವಾಗಿ ಗಾಯಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. 

Advertisement

9 ಮಂದಿ ಎಸ್‌ಯುವಿ ವಾಹನದಲ್ಲಿ ವಿಮಾನ ನಿಲ್ದಾಣದಿಂದ ಮೀರತ್‌ ಗೆ ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿತು. ಗಾಯಗೊಂಡ 9 ಮಂದಿಯ ಪೈಕಿ ಐದು ಮಂದಿ ಆಸ್ಪತ್ರೆಗೆ ತರುತ್ತಿದ್ದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು. 

ಡಂಪರ್‌ ಚಾಲಕನಿಗೆ ತನ್ನ ವಾಹನದ ಮೇಲೆ ನಿಯಂತ್ರಣ ತಪ್ಪಿದಾಗ ವಾಹನವು ರಸ್ತೆ ಬದಿಯ ಬೇಲಿಯನ್ನು ಭೇದಿಸಿ ಆಚೆ ಕಡೆ ಇದ್ದ ಎಸ್‌ಯುವಿ ವಾಹನಕ್ಕೆ ಢಿಕ್ಕಿ ಹೊಡೆಯಿತು ಎಂದು ಹಿರಿಯ ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ. 

ಹರಿಯಾಣ ನೋಂದಾವಣೆ ಸಂಖ್ಯೆ ಹೊಂದಿರುವ ಡಂಪರ್‌ನ ಚಾಲಕನು ಅಪಘಾತ ಉಂಟಾಗುತ್ತಲೇ ವಾಹನ ಬಿಟ್ಟು ಪರಾರಿಯಾಗಿದ್ದಾನೆ. ಡಂಪರ್‌ ಚಾಲಕನು ಒಂದೋ ನಿರ್ಲಕ್ಷ್ಯ ಹಾಗೂ ಅತೀ ವೇಗದಿಂದ ವಾಹನ ಚಲಾಯಿಸಿ ನಿಯಂತ್ರಣ ಕಳೆದುಕೊಂಡಿರಬೇಕು ಇಲ್ಲವೇ ಆತ ನಿದ್ದೆಗಣ್ಣಿನಲ್ಲಿ ಇದ್ದಿರಬೇಕು ಎಂದು ಪೊಲೀಸರು ಶಂಕಿಸಿದ್ದಾರೆ.  

Advertisement

Udayavani is now on Telegram. Click here to join our channel and stay updated with the latest news.

Next