Advertisement

ಸಿಡಿಲಿಗೆ ಇಬ್ಬರು ಬಾಲಕರು ಸೇರಿ ಐವರ ದುರ್ಮರಣ

11:44 PM Jun 03, 2019 | Team Udayavani |

ಕಲಬುರಗಿ: ಬಿಸಿಲಿನಿಂದ ತತ್ತರಿಸಿದ್ದ ಕಲಬುರಗಿ ಜಿಲ್ಲೆಯಲ್ಲಿ ಸೋಮವಾರ ಸಂಜೆ ಗಾಳಿ-ಗುಡುಗು ಸಿಡಿಲು ಮಿಶ್ರಿತ ಮಳೆ ಸುರಿದ ಪರಿಣಾಮ ಚಿತ್ತಾಪುರ ತಾಲೂಕಿನ ಮಾಡಬೂಳನಲ್ಲಿ ಮೂವರು ಹಾಗೂ ಆಳಂದ ತಾಲೂಕಿನಲ್ಲಿ ಬಾಲಕರಿಬ್ಬರು ಸೇರಿ ಐವರು ಸಿಡಿಲಿಗೆ ಬಲಿಯಾಗಿದ್ದಾರೆ.

Advertisement

ಸೋಮವಾರ ಮಧ್ಯಾಹ್ನ ಗಾಳಿಯೊಂದಿಗೆ ಮಳೆ ಸುರಿಯಲು ಆರಂಭಿಸಿದಾಗ ಹೊಲದಲ್ಲಿ ರಕ್ಷಣೆಗೆಂದು ಗಿಡದ ಕೆಳಗೆ ನಿಂತಾಗ ಅವಘಡ ಸಂಭವಿಸಿದೆ. ಚಿತ್ತಾಪುರ ತಾಲೂಕಿನ ಮಾಡಬೂಳ ತಾಂಡಾದ ಹೊಲದಲ್ಲಿ ಗೇಮು ಶಂಕ್ರು ರಾಠೊಡ (32), ಸುರೇಶ ಮಾನಸಿಂಗ್‌ ಪವಾರ (30) ಹಾಗೂ ಗೊಂದಗೇರಿ ತಾಂಡಾದ ಯುವರಾಜ ಖೇಮು ಚವ್ಹಾಣ (24) ಎಂಬುವವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಸೀನಾಬಾಯಿ ಜಗನ್ನಾಥ ಪವಾರ (35) ಎಂಬ ಮಹಿಳೆಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಳಂದ ಪಟ್ಟಣದ ಹೊರವಲಯದ ಹೊಲದಲ್ಲಿ ಸಿಡಿಲಿಗೆ ಆಳಂದನ ಖಾಜಿಗಲ್ಲಿಯ ಅಬ್ದುಲ್‌ ಘನಿ ಲಾಡ್ಲೆಸಾಬ್‌ ಮಾಸುಲದಾರ್‌ (12) ಹಾಗೂ ಢೋರಗಲ್ಲಿಯ ಸೂರ್ಯಕಾಂತ ದಿಗಂಬರ ಶೇರಖಾನೆ (13) ಸಾವಿಗೀಡಾಗಿದ್ದಾರೆ. ಚಿಂಚೋಳಿ ತಾಲೂಕು ಕುಡಹಳಿಯಲ್ಲಿ ಸಿಡಿಲಿಗೆ 14 ಕುರಿಗಳು ಮೃತಪಟ್ಟಿವೆ.

Advertisement

Udayavani is now on Telegram. Click here to join our channel and stay updated with the latest news.

Next