Advertisement

ಜಮ್ಮು : ಕಾರು ಪ್ರಪಾತಕ್ಕೆ ಉರುಳಿ ಐವರ ಸಾವು; 8 ಮಂದಿ ಗಂಭೀರ

06:34 AM Mar 16, 2019 | udayavani editorial |

ಬನಿಹಾಲ್‌/ಜಮ್ಮು :  ಜಮ್ಮು ಕಾಶ್ಮೀರದ ರಾಮಬನ ಜಿಲ್ಲೆಯಲ್ಲಿ ಇಂದು ಶನಿವಾರ ಕಾರೊಂದು ಸ್ಕಿಡ್‌ ಆಗಿ ಪ್ರಪಾತಕ್ಕೆ ಉರುಳಿ ಬಿದ್ಧ ಭೀಕರ ಅವಘಡದಲ್ಲಿ ಇಬ್ಬರು ಮಹಿಳೆಯರು ಮತ್ತು ಒಂದು ಮಗು ಸೇರಿದಂತೆ ಒಟ್ಟು ಐದು ಮಂದಿ ಮೃತಪಟ್ಟು ಇತರ 8 ಮಂದಿ ಗಾಯಗೊಂಡರೆಂದು ಪೊಲೀಸರು ತಿಳಿಸಿದ್ದಾರೆ.

Advertisement

ಎಸ್‌ಯುವಿ ವಾಹನವು ಪ್ರಯಾಣಿಕರನ್ನು ಛಾದರ್‌ಕೋಟ್‌ ನಿಂದ ರಾಜಗಢಕ್ಕೆ ಒಯ್ಯುತ್ತಿದ್ದಾಗ ಈ ದುರ್ಘ‌ಟನೆಯ ಇಂದು ಶನಿವಾರ ಬೆಳಗ್ಗೆ 10.30ರ ಸುಮಾರಿಗೆ ಕುಂದಾ ನಲ್ಹಾ ಸಮೀಪ 500 ಮೀಟರ್‌ ಆಳದ ಪ್ರಪಾತಕ್ಕೆ ಉರುಳಿ ಬಿತ್ತು.

ಪೊಲೀಸರು ಮತ್ತು ಸ್ಥಳೀಯರು ಸೇರಿಕೊಂಡು ರಕ್ಷಣಾ ಕಾರ್ಯ ನಡೆಸಿದರು. ಮೃತಪಟ್ಟಿರುವ ಐದೂ ಮಂದಿಯ ಶವಗಳನ್ನು ಮೇಲಕ್ಕೆತ್ತಲಾಗಿದೆ. ಎಂಟು ಮಂದಿ ಗಾಯಾಳುಗಳಲ್ಲಿ ಹೆಚ್ಚಿನವರ ಸ್ಥಿತಿ ಚಿಂತಾಜನಕವಿದೆ ಎಂದು ತಿಳಿಸಿರುವ ಪೊಲೀಸರು, ಮೃತರ ಗುರುತು ಪತ್ತೆ ಹಚ್ಚುವ ಕೆಲಸ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next