Advertisement

ಮೀನುಗಾರರ ಮೇಲೆ ಆಕ್ರಮಣ: ಪೊಲೀಸರಿಗೆ ದೂರು ನೀಡಲು ನಿರ್ಧಾರ

08:00 PM Feb 13, 2023 | Team Udayavani |

ಮಂಗಳೂರು : ಇತ್ತೀಚೆಗೆ ಕನ್ಯಾಕುಮಾರಿ ಬಳಿ ಮಂಗಳೂರು, ಮಲ್ಪೆಯ ಮೀನುಗಾರರ ಮೇಲೆ ಆಕ್ರಮಣ ನಡೆಸಿದ ತಮಿಳುನಾಡು ಮೀನುಗಾರರ ಮೇಲೆ ಪೊಲೀಸರಿಗೆ ದೂರು ನೀಡಲು ಮೀನುಗಾರರು ನಿರ್ಧರಿಸಿದ್ದಾರೆ.

Advertisement

ಸೋಮವಾರದಂದು ಟ್ರಾಲ್‌ಬೋಟ್‌ ಯೂನಿಯನ್‌ ಪ್ರಮುಖರ ಸಭೆ ನಡೆದಿದ್ದು ಈ ವೇಳೆ ಹಲವಾರು ಮಂದಿ ಬೋಟ್‌ ಮಾಲಕರು ಬೋಟ್‌ಗೆ ಹಾನಿಯುಂಟಾಗಿರುವ ಬಗ್ಗೆ, ಮೀನುಗಾರರ ಮೇಲೆ ಹಲ್ಲೆ ನಡೆದಿರುವ ಬಗ್ಗೆ ದೂರಿದ್ದಾರೆ. ಕೆಲವು ಬೋಟ್‌ಗಳಿಗೆ 15-20 ಲ.ರೂ.ವರೆಗೂ ಹಾನಿ ಸಂಭವಿಸಿದೆ. ತಮಿಳುನಾಡು ಮೀನುಗಾರರು ಕಾನೂನು ಬಾಹಿರವಾಗಿ ವರ್ತಿಸಿದ್ದಾರೆ. ಇಂತಹ ಘಟನೆ ಈ ಹಿಂದೆ ನಡೆದಿಲ್ಲ ಎಂದು ಬೋಟ್‌ ಮಾಲಕರು ಸಭೆಯಲ್ಲಿ ಅಲವತ್ತುಕೊಂಡಿದ್ದಾರೆ.

ತಮಿಳುನಾಡು ಮೀನುಗಾರರು ನಡೆಸಿದ ಆಕ್ರಮಣದಿಂದ ಆಗಿರುವ ತೊಂದರೆ ಬಗ್ಗೆ ಬೋಟ್‌ ಮಾಲಕರು ಯೂನಿಯನ್‌ಗೆ ದೂರು ನೀಡಿದ್ದು ಇದನ್ನು ಪೊಲೀಸ್‌ ಆಯುಕ್ತರು, ಮೀನುಗಾರಿಕಾ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ನೀಡಿ ಸೂಕ್ತ ಕ್ರಮಕ್ಕೆ ಮನವಿ ಸಲ್ಲಿಸಲಾಗುವುದು. ಆ ಬಳಿಕ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಯೂನಿಯನ್‌ ಅಧ್ಯಕ್ಷ ಚೇತನ್‌ ಅವರು “ಉದಯವಾಣಿ’ಗೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next