Advertisement

ಕೃಷಿಕೊಳದಲ್ಲಿ ಮೀನು ಸಾಕಾಣಿಕೆ : ತಜ್ಞರಿಂದ ಕ್ಷೇತ್ರ ಭೇಟಿ

09:11 PM Oct 20, 2019 | sudhir |

ಬಾಯಾರು‌:  ಕ್ಷೇತ್ರ ಭೇಟಿಯ ಅಂಗವಾಗಿ ಮಂಗಳೂರಿನ ಮೀನುಗಾರಿಕೆ ಮಹಾವಿದ್ಯಾಲಯದ ತಜ್ಞರು ಕೇರಳ ಗಡಿ ಪ್ರದೇಶದಲ್ಲಿರುವ ಬಾಯಾರು ಗ್ರಾಮದ ಸಮಗ್ರ ಕೃಷಿ ಭೂಮಿಗೆ ಭೇಟಿ ನೀಡಿ ಜಮೀನಿನ ಕೊಳಗಳಲ್ಲಿ ಮೀನು ಕೃಷಿ ಮಾಡುವ ಬಗ್ಗೆ ರೈತರಿಗೆ ಸಲಹೆ ಸೂಚನೆ ನೀಡಿದರು.

Advertisement

ಪ್ರೊಫೆಸರ್‌ ಡಾ| ರಾಮಚಂದ್ರ ನಾಯ್ಕ ಮತ್ತು ಕೃಷಿ ವಿಜ್ಞಾನ ಕೇಂದ್ರದ ವಿಷಯ ತಜ್ಞ ಡಾ| ಚೇತನ್‌ ಎನ್‌. ಅವರು ಬಾಯಾರು ಗ್ರಾಮದ ನಿವಾಸಿ ರಾಮಚಂದ್ರ ಭಟ್‌ ಅವರ ಜಮೀನಿಗೆ ಭೇಟಿ ನೀಡಿದರು. ಕ್ಷೇತ್ರ ಭೇಟಿಯ ಸಮಯದಲ್ಲಿ ವಿವಿಧ ಕೃಷಿ ಹಾಗೂ ಕೃಷಿಯೇತರ ಪದ್ಧತಿಗಳ ಅಳವಡಿಕೆಗಳ ಬಗ್ಗೆ ಜತೆ ಮುಕ್ತವಾಗಿ ಚರ್ಚಿಸಿದರು.

ಮೀನುಮರಿ ಬಿತ್ತನೆ ಸಮಯಕ್ಕೆ ಸರಿಯಾಗಿ ಮೀನುಗಾರಿಕಾ ಮಹಾ ವಿದ್ಯಾಲಯದ ಜಲ ಪರಿಸರ ನಿರ್ವಹಣೆ ವಿಭಾಗದಲ್ಲಿ ಡಾ| ರಾಮಚಂದ್ರ ನಾಯ್ಕ ರವರ ಮಾರ್ಗದರ್ಶನದಲ್ಲಿ ಡಾಕ್ಟರೇಟ್‌ ಪದವಿಯ ಸಂಶೋಧನಾ ವಿದ್ಯಾರ್ಥಿಗಳಾದ ಕಿಶೋರ್‌ ಸಿ. ಮತ್ತು ಪ್ರವೀಣ್‌ ಜೋಶಿ ಎಚ್‌.ಎಸ್‌., ಮೀನುಗಾರಿಕೆ ಪದವೀಧರ ಗುರುರಾಜ್‌ ಸಹಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next