Advertisement

ರಾಣಿಬೆನ್ನೂರಿನಲ್ಲಿ ಕೋವಿಡ್ ಗೆ ಮೊದಲ ಬಲಿ

05:02 PM Jul 08, 2020 | Suhan S |

ರಾಣಿಬೆನ್ನೂರ: ಇಲ್ಲಿನ ಮಾರುತಿ ನಗರದ ವ್ಯಕ್ತಿಯೊಬ್ಬ (55) ಕೋವಿಡ್ ಸೋಂಕಿನಿಂದ ದಾವಣಗೆರೆಯ ಖಾಸಗಿ ಹಾಸ್ಪಿಟಲ್‌ನಲ್ಲಿ ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ.

Advertisement

ಕೋವಿಡ್ ದಿಂದ ತಾಲೂಕಿನಲ್ಲಿ ಮೊದಲ ಸಾವು ಇದಾಗಿದೆ. ಮೃತ ವ್ಯಕ್ತಿಯು ಒಂದು ವಾರದ ಹಿಂದೆ ಮಗನ ವಿವಾಹ ಮಾಡಿದ್ದು, ಈತನ ಪ್ರಾಥಮಿಕ ಸಂಪರ್ಕದಲ್ಲಿ 80 ಜನರಿದ್ದರು. ಅವರ ಪೈಕಿ 38 ಜನರನ್ನು ಸ್ವ್ಯಾಬ್‌ ಸಂಗ್ರಹಿಸಿ ತಾಲೂಕಿನ ಹಲಗೇರಿಯ ಹಾಸ್ಟೆಲ್‌ವೊಂದರಲ್ಲಿ ಕ್ವಾರಂಟೈನ್‌ ಇರಿಸಲಾಗಿದೆ. ಮೃತ ವ್ಯಕ್ತಿ ವಾಸವಾಗಿದ್ದ ಮಾರುತಿ ನಗರದ ಸುತ್ತಮುತ್ತ 100 ಮೀಟರ್‌ ಕಂಟೇನ್‌ ಮೆಂಟ್‌ಝೋನ್‌ ಆಗಿ ಪರಿವರ್ತಿಸಲಾಗಿದೆ. 26 ಮನೆಗಳ 109 ಜನರಿಗೆ ಹೋಂ ಕ್ವಾರಂಟೈನ್‌ನಲ್ಲಿ ಇರುವಂತೆ ಸೂಚಿಸಲಾಗಿದೆ. ಎಲ್ಲ ಮನೆಗಳಿಗೂ ನಗರಸಭೆ ಸಿಬ್ಬಂದಿಯು ಪಿಪಿಇ ಕಿಟ್‌ ಧರಿಸಿ ಸ್ಯಾನಿಟೈಜರ್‌ ಸಿಂಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next