Advertisement

ಬದರೀನಾಥದಲ್ಲಿ Modi ಹೆಸರಲ್ಲಿ ಮೊದಲ ಪೂಜೆ

08:41 PM Apr 27, 2023 | Team Udayavani |

ಡೆಹ್ರಾಡೂನ್‌: ಚಾರ್‌ಧಾಮ್‌ ಯಾತ್ರೆ ಪ್ರಯುಕ್ತ ಗುರುವಾರ ಬದರೀನಾಥ ದೇಗುಲವನ್ನು ಭಕ್ತಾದಿಗಳ ದರ್ಶನಕ್ಕೆ ತೆರೆಯಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿನಲ್ಲಿ ಮೊದಲ ಪೂಜೆ ಸಲ್ಲಿಸಲಾಗಿದೆ ಎಂದು ದೇಗುಲ ಸಮಿತಿ ತಿಳಿಸಿದೆ. ಗುರುವಾರ ಮುಂಜಾನೆ 7.10ರ ವೇಳೆಗೆ ದೇಗುಲ ತೆರೆಯಲಾಗಿದ್ದು, ತುಂತುರು ಮಳೆ ಹಾಗೂ ಕೊಂಚ ಹಿಮಪಾತದ ನಡುವೆಯೇ ಸಾವಿರಾರು ಮಂದಿ ಭಕ್ತಾದಿಗಳು ಭಗವಾನ್‌ ವಿಷ್ಣುವಿನ ದರ್ಶನ ಪಡೆದಿದ್ದಾರೆ. ದೇವಾಲಯದ ಅಲಂಕಾರಕ್ಕೆಂದು 15 ಕ್ವಿಂಟಾಲ್‌ ಹೂಗಳನ್ನು ಬಳಸಲಾಗಿದ್ದು, ಗರ್ಭಗುಡಿ ತೆರೆಯುತ್ತಿದ್ದಂತೆಯೇ ಮೊದಲ ಪೂಜೆಯನ್ನು ಪ್ರಧಾನಿ ಮೋದಿ ಅವರ ಹೆಸರಿನಲ್ಲಿ ಸಲ್ಲಿಸಲಾಗಿದೆ. ವಿಶೇಷವಾಗಿ ದೇವಾಲಯದ ಮೇಲೆ ಹೆಲಿಕಾಪ್ಟರ್‌ನಿಂದಲೂ ಪುಷ್ಪವೃಷ್ಟಿ ಮಾಡಲಾಗಿದೆ.

Advertisement

ಚಾರ್‌ಧಾಮ್‌ನಲ್ಲಿ ಜಿಯೋ 5ಜಿ: ಬದರೀನಾಥ ದೇಗುಲಯಾತ್ರೆ ಆರಂಭದ ದಿನವೇ ರಿಲಯನ್ಸ್‌ ಜಿಯೋ ಸಂಸ್ಥೆ ಚಾರ್‌ಧಾಮ್‌ ಯಾತ್ರಿಗಳಿಗೆ ಸಿಹಿಸುದ್ದಿ ನೀಡಿದೆ. ಚಾರ್‌ಧಾಮ್‌ ನಾಲ್ಕೂ ದೇವಾಲಯಗಳ ಪ್ರದೇಶದಲ್ಲಿ ಗುರುವಾರದಿಂದ ಜಿಯೋ 5ಜಿ ಸೇವೆ ದೊರೆಯಲಿದ್ದು, ಯಾತ್ರಾರ್ಥಿಗಳು ಇನ್ನು ಹೈಸ್ಪೀಡ್‌ ಡೇಟಾ ಸೇವೆ ಪಡೆಯಬಹುದು ಎಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next