Advertisement

Puttur constituency; ದಲಿತರ ಸಮಸ್ಯೆಗಳ ಸ್ಪಂದನೆಗೆ ಮೊದಲ ಆದ್ಯತೆ : ಅಶೋಕ್‌ ರೈ

02:57 PM May 08, 2023 | Team Udayavani |

ಪುತ್ತೂರು : ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಅಶೋಕ್‌ ಕುಮಾರ್‌ ರೈ ಅವರು ರವಿವಾರ ಪುತ್ತೂರು ಕ್ಷೇತ್ರದ ವಿವಿಧ ಕಾಲನಿಗಳಲ್ಲಿ ಕಾಲ್ನಡಿಗೆ ಮೂಲಕ ಮತಯಾಚನೆ ನಡೆಸಿದರು. ವಿವಿಧ ಭಾಗಗಳಲ್ಲಿ ನೂರಾರು ಸಂಖ್ಯೆಯ ಕಾರ್ಯಕರ್ತರು ಭಾಗವಹಿಸಿದ್ದರು.

Advertisement

ನಿಡ³ಳ್ಳಿ, ಇರ್ದೆ, ಪಾಣಾಜೆ, ಕೊಳ್ತಿಗೆ, ಕೆಯ್ಯೂರು ಗ್ರಾಮ ಸೇರಿದಂತೆ ಹಲವು ದಲಿತ ಕಾಲನಿಗಳಿಗೆ ತೆರಳಿದ ಅಶೋಕ್‌ ಕುಮಾರ್‌ ರೈ ಅಲ್ಲಿನ ಸಮಸ್ಯೆಗಳನ್ನು ಆಲಿಸಿದರು. ತಾನು ಶಾಸಕನಾದಲ್ಲಿ ದಲಿತ ಕಾಲನಿಗಳ ಸುಧಾರಣೆಗೆ ಪ್ರಥಮ ಆದ್ಯತೆ ನೀಡುವುದಾಗಿ ಘೋಷಿಸಿದರು.

ಅಭ್ಯರ್ಥಿ ಅಶೋಕ್‌ ಕುಮಾರ್‌ ರೈ ಮಾತನಾಡಿ, ಬಿಜೆಪಿ ಆಡಳಿತದ ಐದು ವರ್ಷದ ಅವಧಿಯಲ್ಲಿ ಕಾಲನಿಗಳ ನೋವು ಆಲಿಸುವ ಪ್ರಯತ್ನವೇ ನಡೆದಿಲ್ಲ ಅನ್ನುವುದಕ್ಕೆ ಕಾಲನಿಗಳಲ್ಲಿನ ದುಸ್ಥಿತಿಗಳೇ ಸಾಕ್ಷಿ. ಮನೆ ನಿವೇಶನಕ್ಕೆ ಹಕ್ಕುಪತ್ರ ಇಲ್ಲದ ಕುಟುಂಬಗಳಿಗೆ ನ್ಯಾಯ ಸಿಕ್ಕಿಲ್ಲ. ಕೆಲ ಫಲಾನುಭವಿಗಳಿಂದ ಹಣ ಪಡೆದು ಕೆಲಸ ಮಾಡಿಕೊಟ್ಟಿಲ್ಲ. ಇದು ಬಿಜೆಪಿಯ ದಲಿತ ವಿರೋಧಿ ನೀತಿಯ ಆಡಳಿತಕ್ಕೆ ಉದಾಹರಣೆ ಎಂದರು.

ಅಸಹಾಯಕ ಸ್ಥಿತಿಯಲ್ಲಿರುವ ದಲಿತ ಬಂಧುಗಳ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸವನ್ನು ಕಾಂಗ್ರೆಸ್‌ ಸರಕಾರ ಮಾಡಲಿದೆ. ಪುತ್ತೂರು ಕ್ಷೇತ್ರದಲ್ಲಿನ ದಲಿತ ಕುಟುಂಬಗಳಿಗೆ ಹಕ್ಕುಪತ್ರ, ನಿವೇಶನ, ಮನೆ, ಕುಡಿಯುವ ನೀರು ಸೇರಿದಂತೆ ಮೂಲ ಸೌಕರ್ಯ ಒದಗಿಸಲು ತಾನು ಬದ್ಧನಿದ್ದು ತನ್ನನ್ನು ಈ ಬಾರಿ ಗೆಲ್ಲಿಸುವಂತೆ ಅಶೋಕ್‌ ಕುಮಾರ್‌ ರೈ ಮನವಿ ಮಾಡಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ಕೆಪಿಸಿಸಿ ಸಂಯೋಜಕ ಎ.ಹೇಮನಾಥ ಶೆಟ್ಟಿ ಕಾವು, ಪುತ್ತೂರು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಂ.ಬಿ. ವಿಶ್ವನಾಥ ರೈ, ಉಪ್ಪಿನಂಗಡಿ-ವಿಟ್ಲ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಡಾ|ರಾಜರಾಂ ಮೊದಲಾದವರು ಉಪಸ್ಥಿತರಿದ್ದರು.

ಇಂದು ಪುತ್ತೂರಿಗೆ ನಿಕೇತ್‌ ರಾಜ್‌ ಮೌರ್ಯ ಹಾಗೂ ಚಿತ್ರನಟಿ ರಮ್ಯಾ
ಮೇ 8ರಂದು ಸಂಜೆ 3 ಗಂಟೆಗೆ ಪುತ್ತೂರು ನಗರದಲ್ಲಿ ನಡೆಯಲಿರುವ ಕಾಂಗ್ರೆಸ್‌ ಅಭ್ಯರ್ಥಿ ಅಶೋಕ್‌ ಕುಮಾರ್‌ ರೈ ಅವರ ಪರ ರೋಡ್‌ ಶೋದಲ್ಲಿ ಖ್ಯಾತ ವಾಗ್ಮಿ ನಿಖೇತ್‌ರಾಜ್‌ ಮೌರ್ಯ ಹಾಗೂ ಚಿತ್ರನಟಿ ರಮ್ಯ ಭಾಗವಹಿಸಲಿದ್ದು 25 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಹೊಂದಲಾಗಿದೆ. ಕಾರ್ಯಕ್ರಮದ ಪೂರ್ವಭಾವಿಯಾಗಿ ಬೂತ್‌ ಮಟ್ಟದಲ್ಲಿ ಕಾರ್ಯಕರ್ತರು ಮನೆ ಮನೆಗೆ ತೆರಳಿ ಪ್ರಚಾರ ಕಾರ್ಯ ನಡೆಸಿದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next