Advertisement

ಕಾಫಿನಾಡು ಚಿಕ್ಕಮಗಳೂರಿಗೂ ಕಾಲಿಟ್ಟ ಕೋವಿಡ್-19; ಸರ್ಕಾರಿ ವೈದ್ಯ ಮತ್ತು ಗರ್ಭಿಣಿಗೆ ಸೋಂಕು

12:49 PM May 19, 2020 | keerthan |

ಚಿಕ್ಕಮಗಳೂರು: ಇದುವರೆಗೆ ಯಾವುದೇ ಕೋವಿಡ್19 ಸೋಂಕು ಪ್ರಕರಣವಿಲ್ಲದೆ ನೆಮ್ಮದಿಯಲ್ಲಿದ್ದ ಕಾಫಿನಾಡು ಚಿಕ್ಕಮಗಳೂರಿನಲ್ಲಿ ಎರಡು ಕೋವಿಡ್-19 ಸೋಂಕು ಪ್ರಕರಣಗಳು ದೃಢವಾಗಿದೆ. ಇದಿರಂದ ಜನತೆಯಲ್ಲಿ ಆತಂಕ ಮನೆ ಮಾಡಿದೆ.

Advertisement

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ಹಾಗೂ ಮೂಡಿಗೆರೆಯಲ್ಲಿ ಸೋಂಕು ಪ್ರಕರಣ ದೃಢವಾಗಿದೆ. ಮೂಡಿಗೆರೆಯ ವೈದ್ಯ ಮತ್ತು ತರೀಕೆರೆಯ ಗರ್ಭಿಣಿಗೆ ಕೋವಿಡ್-19 ಸೋಂಕು ತಾಗಿದೆ.

ವೈದ್ಯ ದಿನಕ್ಕೆ ನೂರಾರು ಜನರಿಗೆ ಚಿಕಿತ್ಸೆ ನೀಡಿದ್ದು ಮತ್ತು ಆತನ ಟ್ರಾವಲ್ ಹಿಸ್ಟರಿ ಜನರ ಆತಂಕಕ್ಕೆ ಕಾರಣವಾಗಿದೆ.  ವೈದ್ಯರು ವಾಸವಿದ್ದ ಗ್ರಾಮ ಮತ್ತು ಸೇವೆ ಸಲ್ಲಿಸುತ್ತಿದ್ದ ಆಸ್ಪತ್ರೆಯ ಸುತ್ತಮುತ್ತ ಸೀಲ್ ಡೌನ್ ಮಾಡಲಾಗಿದೆ.

ಮೂಡಿಗೆರೆ ಸರ್ಕಾರಿ ವೈದ್ಯರೊಬ್ಬರಿಗೆ ಕೋವಿಡ್-19 ಸೋಂಕು ಬಂದಿದೆ ಎಂಬ ಸುದ್ದಿ ಹೊರ ಬೀಳುತ್ತಲೇ ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ. ಈ ಬಗ್ಗೆ ಜಿಲ್ಲಾಡಳಿತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದು ವೈದ್ಯರು ವಾಸವಿದ್ದ ಸುಶಾಂತ್ ನಗರ ಹಾಗೂ ನಂದಿಪುರ ಗ್ರಾಮಗಳನ್ನು ಸೀಲ್ ಡೌನ್ ಮಾಡಲಾಗಿದೆ. ಸೋಂಕಿತರು ಸಂಪರ್ಕದಲ್ಲಿದ್ದ ಜನರನ್ನು ತನಿಖೆ ಮಾಡಲಾಗುವುದು ಜಿಲ್ಲಾಡಳಿತ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next