Advertisement

ಗುಂಡಿನ ದಾಳಿ: ತಾಯಿ-ಮಗ ಸಾವು

01:40 AM Jul 28, 2019 | Sriram |

ಅಂಕೋಲಾ: ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಸಹೋದರನ ಪತ್ನಿ ಹಾಗೂ ಸಹೋದರನ ಮಗನ ಮೇಲೆ ಗುಂಡಿನ ದಾಳಿ ನಡೆಸಿದ್ದು, ಈ ವೇಳೆ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದು, ತಾಯಿಯನ್ನು ಮಣಿಪಾಲಕ್ಕೆ ಕರೆ ದೊಯ್ಯುವಾಗ ಮಾರ್ಗಮಧ್ಯೆ ಮೃತಪಟ್ಟ ಘಟನೆ ಪಟ್ಟಣದ ಮಠಾಕೇರಿಯಲ್ಲಿ ಶನಿವಾರ ರಾತ್ರಿ ನಡೆದಿದೆ.

Advertisement

ಭೂ ಸೇನೆಯ ನಿವೃತ್ತ ಹವಾಲ್ದಾರ್‌ ಸುಬ್ರಾಯ ಯಾನೆ ಅಜಯ ಅಚ್ಯುತ ಪ್ರಭು (45) ಗುಂಡು ಹಾರಿಸಿದ ಆರೋಪಿ. ನಗರದ ಜೈಹಿಂದ್‌ ಆಂಗ್ಲ ಮಾಧ್ಯಮ ಶಾಲೆಯ ಎರಡನೇ ತರಗತಿ ವಿದ್ಯಾರ್ಥಿ ಅನುಜ ಅಮಿತ ಪ್ರಭು (8) ಮೃತ ಬಾಲಕ. ಈತನ ತಾಯಿ ಮೇಧಾ ಅಮಿತ ಪ್ರಭು (33) ತೀವ್ರವಾಗಿ ಗಾಯ ಗೊಂಡಿದ್ದು, ಖಾಸಗಿ ಆಸ್ಪತ್ತೆಯಲ್ಲಿ ಪ್ರಾಥ ಮಿಕ ಚಿಕಿತ್ಸೆಗೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ಕಳಿಸಲಾಗಿತ್ತು. ಆದರೆ ಮಾರ್ಗ ಮಧ್ಯದಲ್ಲಿಯೇ ಅವಳು ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ.

ಘಟನೆ ವಿವರ: ಆರೋಪಿ ಸುಬ್ರಾಯ ಯಾನೆ ಅಜಯ ಅಚ್ಯುತ ಪ್ರಭು ಶನಿವಾರ ರಾತ್ರಿ 7:30 ರ ಸುಮಾರಿಗೆ ತನ್ನ ಮನೆಯ ಮಹಡಿ ಕೆಳಗಿರುವ ಸಹೋದರನ ಮನೆಗೆ ಆಗಮಿಸಿ ತಾಯಿ, ಮಗನಿಗೆ ಮನೆಯಲ್ಲಿ ಪಾಠ ಹೇಳಿಕೊಡುತ್ತಿದ್ದ ವೇಳೆ ಏಕಾಏಕಿ ತನ್ನ ಲೈಸೆನ್ಸ್‌ ಹೊಂದಿರುವ 12 ಬೋರ್‌, ಡಬಲ ಬ್ಯಾರೆಲ್ ಬಂದೂಕಿನಿಂದ 2 ಬಾರಿ ಗುಂಡು ಹಾರಿಸಿದ್ದಾನೆ. ಸ್ಥಳದ ಲ್ಲಿಯೇ ಮಗು ಮೃತಪಟ್ಟಿದೆ. ಆಸ್ಪತ್ರೆಗೆ ಸಾಗಿಸುವಾಗ ತಾಯಿ ಕೂಡ ಮೃತಪಟ್ಟಿದ್ದಾಳೆ. ಸಿಪಿಐ ಬಿ. ಪ್ರಮೋದ ಕುಮಾರ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಂ ಡಿದ್ದಾರೆ. ಘಟನಾ ಸ್ಥಳಕ್ಕೆ ಡಿವೈಎಸ್ಪಿ ಶಂಕರ ಮಾರಿಹಾಳ ಆಗಮಿಸಿ ಪರಿಶಿಲನೆ ನಡೆಸಿದ್ದಾರೆ. ಆರೋಪಿಯನ್ನು ಬಂಧಿಸಿದ್ದು ವಿಚಾರಣೆಗೆ ಒಳಪಡಿಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next