Advertisement

ಹುಣ್ಸೆಕಟ್ಟೆ : ಅಪಾಯಕಾರಿ ಬಾವಿಗೆ ದಂಡೆ ನಿರ್ಮಾಣ

10:31 PM Jun 03, 2019 | Sriram |

ಕುಂದಾಪುರ: ಪುರಸಭೆ ವ್ಯಾಪ್ತಿಯ ಹುಣ್ಸೆಕಟ್ಟೆಯಲ್ಲಿ ಕುಂದಾಪುರ – ಶಿವಮೊಗ್ಗ ರಾಜ್ಯ ಹೆದ್ದಾರಿಯ ಬಲ ಬದಿಯಲ್ಲಿ ರಸ್ತೆಗೆ ತಾಗಿಕೊಂಡೇ ಇರುವ ಅಪಾಯಕಾರಿ ಬಾವಿಯ ಕುಸಿದ ದಂಡೆಯನ್ನು ದುರಸ್ತಿ ಮಾಡಲಾಗಿದೆ.

Advertisement

ರಾಜ್ಯ ಹೆದ್ದಾರಿಗೆ ತಾಗೀಕೊಂಡೆ ಇರುವ ಈ ಅಪಾಯಕಾರಿ ಬಾವಿಯ ದಂಡೆಗೆ ಕಾರೊಂದು ಢಿಕ್ಕಿಯಾಗಿ ಅದು ಕುಸಿದಿತ್ತು. ಈ ಬಗ್ಗೆ “ಉದಯವಾಣಿ’ಯು ಮೇ 27 ರಂದು ಅಪಾಯ ಆಹ್ವಾನಿಸುತ್ತಿರುವ ಬಾವಿ ಎನ್ನುವ ವರದಿ ಮೂಲಕ ಗಮನಸೆಳೆದಿತ್ತು. ಇದಕ್ಕೆ ಸ್ಪಂದಿಸಿದ ಸ್ಥಳೀಯ ಹುಂಚಾರುಬೆಟ್ಟು ವಾರ್ಡಿನ ಪುರಸಭೆ ಸದಸ್ಯ ಶೇಖರ್‌ ಪೂಜಾರಿಯವರು, ಅಲ್ಲೇ ಪಕ್ಕದಲ್ಲಿ ಈ ಬಾವಿಯ ನೀರಿನ ಪ್ರಯೋಜನ ಪಡೆದುಕೊಂಡು, ರಿಂಗ್‌ ಕೆಲಸ ಮಾಡುತ್ತಿರುವ ಅನಿಲ್‌ ಎಂಬುವರಿಗೆ ತಿಳಿಸಿ, ಬಾವಿಗೆ ದಂಡೆ ನಿರ್ಮಿಸಲು ಶ್ರಮಿಸಿದ್ದಾರೆ.

ಬಾವಿಯ ದಂಡೆಯ ಒಂದು ಬದಿ ಕುಸಿದಿದ್ದುರಿಂದ ವಾಹನ ಸವಾರರಿಗೆ ಮತ್ತಷ್ಟು ಅಪಾಯಕಾರಿಯಾಗುವ ಸಂಭವವಿತ್ತು. ಸಕಾಲಿಕವಾಗಿ ವರದಿ ಪ್ರಕಟಿಸಿ, ಸಂಬಂಧಪಟ್ಟವರ ಗಮನಸೆಳೆಯುವ ಮೂಲಕ ಬಾವಿಗೆ ದಂಡೆ ನಿರ್ಮಾಣವಾಗಿದೆ. ಇದರಿಂದ ಮತ್ತೂಂದು ಅವಘಡ ಸಂಭವಿಸುವ ಮುನ್ನ ಎಚ್ಚೆತ್ತುಕೊಂಡಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next