Advertisement

ಗ್ಯಾಸ್‌ ಸೋರಿಕೆಯಿಂದ ಅಗ್ನಿ ದುರಂತ: ಮೂವರ ಸಾವು

12:43 AM Apr 18, 2019 | Team Udayavani |

ಬೆಂಗಳೂರು: ಮನೆಯಲ್ಲಿ ಎಲ್‌ಪಿಜಿ ಗ್ಯಾಸ್‌ ಸೋರಿಕೆಯಾದ ಪರಿಣಾಮ ಸಂಭವಿಸಿದ ಬೆಂಕಿ ಅನಾಹುತದಲ್ಲಿ ಬಿಹಾರ ಮೂಲದ ಮೂವರು ಮೃತಪಟ್ಟಿದ್ದಾರೆ. ಸಂಜೀವ್‌ (35), ರಾಮ್‌ ಭಗತ್‌ (28), ಶಂಕರ್‌ ಭಗತ್‌ (17) ಮೃತಪಟ್ಟಿದ್ದು, ನಿರಂಜನ್‌ (28) ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ಬಾಣಸವಾಡಿಯ ಮುರುಗನ್‌ ಥಿಯೇಟರ್‌ ಮನೆಯೊಂದರಲ್ಲಿ ಏ.11ರಂದು ಬೆಳಗ್ಗೆ ಸಂಭವಿಸಿದ ಅಗ್ನಿ ದುರಂತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಆದರೆ, ಚಿಕಿತ್ಸೆ ಫ‌ಲಿಸದೆ ಶಂಕರ್‌ ಭಗತ್‌ ಮತ್ತು ಸಂಜೀವ್‌ ಮಂಗಳವಾರ ಮೃತಪಟ್ಟಿದ್ದು, ರಾಮ್‌ ಭಗತ್‌ ಬುಧವಾರ ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಾಣಸವಾಡಿ ಪ್ಯೂರ್‌ಫ‌ುಡ್‌ ಹೆಸರಿನ ಜ್ಯೂಸ್‌ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ನಾಲ್ವರು ಬಾಡಿಗೆ ಮನೆಯಲ್ಲಿ ಒಟ್ಟಿಗೆ ವಾಸಿಸುತ್ತಿದ್ದರು. ಏ. 11ರಂದು ಬೆಳಗ್ಗೆ 8.30ರ ಸುಮಾರಿಗೆ ಅಡುಗೆ ಮಾಡುವ ಸಲುವಾಗಿ ಶಂಕರ್‌ ಭಗತ್‌, ಗ್ಯಾಸ್‌ಆನ್‌ ಮಾಡುತ್ತಿದ್ದಂತೆ ಸಿಲಿಂಡರ್‌ನಿಂದ ಸೋರಿಕೆಯಾದ ಗ್ಯಾಸ್‌ಗೆ ಬೆಂಕಿ ತಗುಲಿ ಮನೆಯಿಡಿ ಬೆಂಕಿ ಆವರಿಸಿತ್ತು.

ಪರಿಣಾಮ ದುರಂತ ಸಂಭವಿಸಿತ್ತು. ಸ್ಥಳೀಯರು ನಾಲ್ವರನ್ನೂ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದರು. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next