Advertisement

ಅಗ್ನಿ ಅನಾಹುತ: ಆಸ್ತಿ ಪಾಸ್ತಿ ಹಾನಿ

09:48 AM Feb 07, 2022 | Team Udayavani |

ಮಹಾಲಿಂಗಪುರ: ಪಟ್ಟಣದಲ್ಲಿ ಬಾರದಾನ ಚೀಲುಗಳ ಸಂಗ್ರಹ ಉಗ್ರಾಣಗಳಿಗೆ ಆಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ರೂ. ಮೌಲ್ಯದ ಆಸ್ತಿಪಾಸ್ತಿ ಹಾನಿಯಾಗಿದೆ.

Advertisement

ಪಟ್ಟಣದ ಎಪಿಎಂಸಿ ಹತ್ತಿರ ಮೂಸಾ ಸಾಂಗ್ಲಿಕರ್‌ ಹಾಗೂ ಹುಸೇನ್‌ ಚಿನಗುಂಡಿ ಇವರ ಬಾರದಾನ ಸಂಗ್ರಹಗಾರಗಳಿಗೆ ಬೆಂಕಿ ತಗುಲಿ ಬೈಕ್‌ ಸೇರಿದಂತೆ ಲಕ್ಷಾಂತರ ರೂಪಾಯಿಗಳ ಹಾನಿ ಸಂಭವಿಸಿದೆ.

ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಎರಡೂ ಕಡೆಗಳಲ್ಲಿ ಬೆಂಕಿ ನಂದಿಸಿದರು. ಸ್ಥಳಕ್ಕೆ ಸ್ಥಳೀಯ ಠಾಣಾಧಿಕಾರಿ ವಿಜಯ್‌ ಕಾಂಬ್ಳೆ ಮತ್ತು ಸಿಬ್ಬಂದಿ ಎಸ್‌.ಡಿ. ಬಾರಿಗಡ್ಡಿ, ಎಂ. ಎಸ್‌. ಕನಶೆಟ್ಟಿ, ಸಂತೋಷ ಗಾಳಪ್ಪಗೋಳ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next