Advertisement

ತಿಕೋಟಾ ಅಗ್ನಿ ಆಕಸ್ಮಿಕ: ಬೇಕರಿ, ಪೈಪ್ ಅಂಗಡಿಗೆ ಬೆಂಕಿ; ಲಕ್ಷಾಂತರ ರೂ. ನಷ್ಟ

08:57 AM Apr 03, 2021 | keerthan |

ವಿಜಯಪುರ: ಜಿಲ್ಲೆಯ ತಿಕೋಟಾ ಪಟ್ಟಣದಲ್ಲಿ ಸಂಭವಿಸಿದ ಅಗ್ನಿ ಆಕಸ್ಮಿಕ ಘಟನೆಯಲ್ಲಿ ಬೇಕರಿ ಹಾಗೂ ಕೃಷಿ ಪೈಪ್ ಅಂಗಡಿ ಸುಟ್ಟು ಲಕ್ಷಾಂತರ ರೂ. ನಷ್ಟ ಉಂಟಾದ ಘಟನೆ ಶನಿವಾರ ಜರುಗಿದೆ.

Advertisement

ಶನಿವಾರ ನಸುಕಿನಲ್ಲಿ ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿರುವ ಅಂಗಡಿಗಳಲ್ಲಿ ಅಗ್ನಿ ದುರಂತ ಸಂಭವಿಸಿದ್ದು, ಸುದ್ದಿ ತಿಳಿಯುತ್ತಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕೆಲಸದಲ್ಲಿ ತೊಡಗಿದ್ದಾರೆ.

ಇದನ್ನೂ ಓದಿ:ನಾನು ಪೋಸ್ಟ್‌ಮನ್‌ ಅಲ್ಲ, ಯಾವುದೇ ತಪ್ಪು ಮಾಡಿಲ್ಲ: ಸಚಿವ ಈಶ್ವರಪ್ಪ

ಮಲ್ಲಪ್ಪ ರಾಣಗಟ್ಟಿ ಅವರಿಗೆ ಸೇರಿದ ಪೈಪ್ ಅಂಗಡಿ, ಲೊಂಗಯ್ಯ ಪೂಜೇರಿ ಅವರಿಗೆ ಸೇರಿದ ಬೇಕರಿ ಅಂಗಡಿಗಳಲ್ಲಿ ಈ ಅಗ್ನಿ ದುರಂತ ಸಂಭವಿಸಿದ್ದು, ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಹಾನಿಯಾಗಿವೆ.

Advertisement

ಈ ಎರಡೂ ಅಂಗಡಿಗಳ ಮಾಲೀಕರು ಶುಕ್ರವಾರವಷ್ಟೇ ಸುಮಾರು 10 ಲಕ್ಷಕ್ಕೂ ಅಧಿಕ ಮೌಲ್ಯದ ಸಾಮಗ್ರಿಗಳನ್ನು ತರಿಸಿ, ಸಂಗ್ರಹಿಸಿದ್ದರು. ಬೆಳಿಗ್ಗೆ ಎಲ್ಲವೂ ಬೆಂಕಿಗೆ ಸುಟ್ಟು ಕರಕಲಾಗಿವೆ.

ಇದನ್ನೂ ಓದಿ: 50 ವರ್ಷ ಕಾದ ಪ್ರೇಮಿಗೆ ಕೊನೆಗೂ ಸಿಕ್ಕಳು ಪ್ರಿಯತಮೆ!

ಸ್ಥಳಕ್ಕೆ ಆಗಮಿಸಿರುವ ತಿಕೋಟಾ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next