Advertisement

ಶ್ರೀರಂಗಪಟ್ಟಣ: ಕರಿಘಟ್ಟಕ್ಕೆ ಬೆಂಕಿ; ನೂರಾರು ಎಕರೆ ಅರಣ್ಯ ನಾಶ

03:29 PM Mar 14, 2022 | Team Udayavani |

ಶ್ರೀರಂಗಪಟ್ಟಣ: ಪ್ರಸಿದ್ಧ ಪ್ರಕೃತಿ ತಾಣ ಕರಿಘಟ್ಟ ಗುಡ್ಡದಲ್ಲಿ  ಕುದುರೆ ಕಲ್ಲು ಗುಡ್ಡ, ಅಲ್ಲಾಪಟ್ಟಣ ಗಡಿ, ಸಿಡಿಎಸ್ ನಾಲೆಗಡಿ, -ಶಿಖರ ಭಾಗದಲ್ಲಿ ಏಕ ಕಾಲದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ನೂರಾರು ಎಕರೆ ಅರಣ್ಯ ಸುಟ್ಟು ಹೋಗಿದೆ.

Advertisement

ಅರ್ಧ ದಿನ ಬೆಂಕಿ ಉರಿಯುತ್ತಲೇ ಇತ್ತು. ಬಿಸಿಲು, ಗಾಳಿಯಿಂದಾಗಿ ಬೆಂಕಿ ನಂದಿಸಲಾಗದೇ ಅರಣ್ಯ ಇಲಾಖೆ ಸಿಬ್ಬಂದಿ ಪರದಾಡಿದರು. ಬೆಂಕಿ ರೇಖೆ ಯನ್ನು ದಾಟಿಕೊಂಡು ಬೆಂಕಿ ಮುನ್ನುಗ್ಗುತಿತ್ತು. ಅರಣ್ಯ ಇಲಾಖೆ ಹಾಗೂ ಪರಿಸರ ಪ್ರಿಯರು. ನೆಟ್ಟಿ ಬೆಳೆಸುತ್ತಿದ್ದ ವಿವಿಧ ಗಿಡಗಳು ಸುಟ್ಟು ಹೋದವು, ಪ್ರಾಣಿ, ಪಕ್ಷಿಗಳು ಜೀವ ಕಳೆದುಕೊಂಡಿವೆ. ಪ್ರತಿ ವರ್ಷ ಕರಿಪಟ್ಟ ಗುಡ್ಡಕ್ಕೆ ಬೆಂಕಿ ಬೀಳುತ್ತಲೇ ಇದೆ. ಇದನ್ನು ತಡೆಯಲು ಅರಣ್ಯ ಇಲಾಖೆ ಕ್ರಮವಹಿಸಬೇಕು ಎಂದು ಅರಣ್ಯದ ಪಕ್ಕದ ನಿವಾಸಿಗಳು ಹೇಳಿದ್ದಾರೆ.

‘ಘಟನೆಗೆ ಕಿಡಿಗೇಡಿಗಳ ಕೃತ್ಯ ಕಾರಣ, ಈ ಬಗ್ಗೆ ತನಿಖೆ ನಡೆಯಲಿದೆ. ಹುಲ್ಲು ಜಾಸ್ತಿ ಇದ್ದುದರಿಂದ ಬೆಂಕಿ ಎಲ್ಲ ಕಡೆ ವ್ಯಾಪಿಸಿದೆ. ಸದ್ಯ ಬೆಂಕಿಯನ್ನು ಇಲಾಖೆ ಸಿಬ್ಬಂದಿ ನಂದಿಸಿದ್ದಾರ ಎಂದು ಉಪಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ್‌ ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next