Advertisement

ಮಂಗಳೂರು ದಕ್ಕೆಯಲ್ಲಿ ಅವಘಡ ; ಬೋಟುಗಳು ಅಗ್ನಿಗಾಹುತಿ

10:02 AM Aug 02, 2019 | Team Udayavani |

ಮಂಗಳೂರು: ರಜೆ ಬಳಿಕ ಸಮುದ್ರಕ್ಕೆ ಇಳಿಯಲು ಸಿದ್ಧತೆ ನಡೆಸುತ್ತಿದ್ದ ಮಂಗಳೂರಿನ 3 ಹೊಸ ಬೋಟುಗಳಿಗೆ ಗುರುವಾರ ಬೆಂಕಿ ತಗುಲಿ ಸುಮಾರು 1 ಕೋ.ರೂ. ನಷ್ಟ ಸಂಭವಿಸಿದೆ.

Advertisement

ಮೀನುಗಾರಿಕಾ ಋತು ಆರಂಭಗೊಂಡಿದ್ದು, ದಕ್ಕೆಯಿಂದ ಬೋಟು ಗಳು ಸಮುದ್ರಕ್ಕೆ ಇಳಿಯ ಲಾರಂಭಿಸಿವೆ. ಇದೇ ವೇಳೆ ದಕ್ಕೆಯ ಮೆಟ್ರೋ ಬಳಿಯ ಎಂಜಿನಿಯರ್‌ ಯಾರ್ಡ್‌ ನಲ್ಲಿ ಕೆಲವು ಹೊಸ ಬೋಟುಗಳು ಸಮುದ್ರಕ್ಕೆ ತೆರಳಲು ಸಿದ್ಧವಾಗುತ್ತಿವೆ. ಹೊಸ ಬೋಟುಗಳ ಫೈಬರ್‌ ಕೆಲಸ ಸೇರಿದಂತೆ ಕೊನೆಯ ಹಂತದ ಸಿದ್ಧತೆ ನಡೆಯುತ್ತಿತ್ತು. ಗುರುವಾರ ಸಂಜೆ ಕಾಮಗಾರಿ ನಡೆಸುತ್ತಿದ್ದ ವೇಳೆ ಒಂದು ಬೋಟ್‌ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿತು. ತತ್‌ಕ್ಷಣವೇ ಬೆಂಕಿ ಇನ್ನೆರಡು ಹೊಸ ಬೋಟುಗಳಿಗೂ ವ್ಯಾಪಿಸಿತು.

ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬಂದಿ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಲು ಪ್ರಯತ್ನಿಸಿದರು. ಬೆಂಕಿಯಿಂದ 1 ಕೋ.ರೂ. ನಷ್ಟ ಅಂದಾಜಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next