Advertisement

ಬೆಂಕಿ ದುರಂತ: ಮಗು ಸೇರಿ 17 ಮಂದಿ ಸಾವು

12:30 AM Feb 13, 2019 | Team Udayavani |

ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ದಿಲ್ಲಿಯ ಕರೋಲ್‌ಬಾಗ್‌ನ ಹೋಟೆಲ್‌ ಒಂದರಲ್ಲಿ ಮಂಗಳವಾರ ಬೆಳಗಿನ ಜಾವ ಸಂಭವಿಸಿದ ಅಗ್ನಿ ಆಕಸ್ಮಿಕದಲ್ಲಿ ಮಗು ಸೇರಿದಂತೆ 17 ಮಂದಿ ಅಸುನೀಗಿದ್ದಾರೆ. ಈ ಪೈಕಿ ಇಬ್ಬರು ಬೆಂಕಿಯಿಂದ ರಕ್ಷಿಸಿಕೊಳ್ಳಲು ಕಟ್ಟಡದಿಂದ ಹಾರಿದಾಗ ಬಿದ್ದು ಕೊನೆ ಯುಸಿರೆಳೆದಿದ್ದಾರೆ. ಇತರ 35 ಮಂದಿಗೆ ಸುಟ್ಟ ಗಾಯಗಳಾಗಿವೆ. ಅವರನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

Advertisement

ಅರ್ಪಿತ್‌ ಪ್ಯಾಲೇಸ್‌ ಹೊಟೇಲ್‌ನ 2ನೇ ಮಹಡಿಯಲ್ಲಿ  ಬೆಳಗ್ಗೆ 3.30ಕ್ಕೆ ಬೆಂಕಿ ಕಾಣಿಸಿಕೊಂಡಿತು. 45 ಕೊಠಡಿಗಳಿರುವ ಅದರಲ್ಲಿ 53 ಮಂದಿ ಇದ್ದರು. ಈ ಸಮಯದಲ್ಲಿ ಎಲ್ಲರೂ ಗಾಢ ನಿದ್ದೆಯಲ್ಲಿ ದ್ದರು. ಶಾರ್ಟ್‌ ಸರ್ಕ್ನೂಟ್‌ನಿಂದಾಗಿ ಈ ದುರ್ಘ‌ಟನೆ ಸಂಭವಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. 

4.35ರ ವೇಳೆಗೆ ಅಗ್ನಿಶಾಮಕ ದಳದ 24 ಸಿಬಂದಿ ಆಗಮಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದರು. ಒಟ್ಟಾರೆ 
13 ಮಂದಿಯ ಮೃತದೇಹಗಳನ್ನು ಗುರುತಿಸಲಾಗಿದೆ.  
ದಿಲ್ಲಿ ಸರಕಾರ ಘಟನೆಗೆ ಸಂಬಂಧಿಸಿ ದಂತೆ ಮ್ಯಾಜಿಸ್ಟ್ರೇಟ್‌ ತನಿಖೆಗೆ ಆದೇಶಿಸಿದೆ. ಜತೆಗೆ ಅಸುನೀಗಿದವರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರವನ್ನೂ ಘೋಷಿಸಿದೆ. ರಾಷ್ಟ್ರಪತಿ ಕೋವಿಂದ್‌, ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಶೋಕ ವ್ಯಕ್ತಪಡಿಸಿದ್ದಾರೆ. 

ಕೇರಳದ ಒಂದೇ ಕುಟುಂಬದ ಮೂವರು ಬಲಿ: ದಿಲ್ಲಿಯಿಂದ ಹರಿದ್ವಾರಕ್ಕೆ ತೆರಳುವ ಮುನ್ನ ಹೋಟೆಲ್‌ನಲ್ಲಿ 
ತಂಗಿದ್ದ ಕೇರಳದ ಒಂದೇ ಕುಟುಂಬದ ಮೂವರು ಅವಘಡದಲ್ಲಿ ಸಜೀವದಹನ ವಾಗಿದ್ದಾರೆ. ಬೆಳಗ್ಗೆ 3.30ಕ್ಕೆ ಹರಿದ್ವಾರಕ್ಕೆ ಹೊರಡಲು ಸಿದ್ಧರಾಗುತ್ತಿದ್ದೆವು. ಅಷ್ಟರಲ್ಲಿ ಕೊಠಡಿಯ ಕರೆಂಟ್‌ ಹೋಯಿತು. ಕ್ಷಣಮಾತ್ರದಲ್ಲಿ ದಟ್ಟ ಹೊಗೆ ಆವರಿಸಿತು. ಬೆಂಕಿಯ ಕೆನ್ನಾಲಿಗೆಗೆ ನನ್ನ ಸಹೋದರಿ, ತಾಯಿ ಮತ್ತು ಅಣ್ಣ ಸಾವಿಗೀಡಾದರು ಎಂದು ಕೇರಳದ ಎರ್ನಾಕುಲಂನ ಸೋಮಶೇಖರ್‌ ಹೇಳಿದ್ದಾರೆ.  ಇನ್ನಿಬ್ಬರು ಮ್ಯಾನ್ಮಾರ್‌ನವರು ಎಂದು ಗುರುತಿಸಲಾಗಿದೆ.

ಐಆರ್‌ಎಸ್‌ ಅಧಿಕಾರಿ ಸಾವು: ಬೆಂಕಿ ವ್ಯಾಪಿಸುತ್ತಿದ್ದಂತೆ 2ನೇ ಮಹಡಿಯಿಂದ ಕೆಳಕ್ಕೆ ಹಾರಿದ ಭಾರತೀಯ ಕಂದಾಯ ಸೇವೆ(ಐಆರ್‌ಎಸ್‌) ಅಧಿಕಾರಿ ಸುರೇಶ್‌ ಕುಮಾರ್‌ ಅವರೂ ಸಾವಿಗೀಡಾಗಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next