Advertisement

ಅಗ್ನಿ ಆಕಸ್ಮಿಕ; ಮನೆಗೆ ಹಾನಿ

03:35 AM Feb 16, 2017 | Team Udayavani |

ಬೆಳ್ತಂಗಡಿ: ಅಳದಂಗಡಿ ಸನಿಹದ ಒಬ್ಬೆದೊಟ್ಟು ವಾರಿಜಾ ಆಚಾರಿ¤ (75) ಅವರ ಮನೆಗೆ ಮಂಗಳವಾರ ತಡ ರಾತ್ರಿ ಬೆಂಕಿ ತಗುಲಿ ಅರ್ಧ ಸುಟ್ಟು ಹೋಗಿ ಲಕ್ಷಾಂತರ ರೂ ನಷ್ಟ ಸಂಭವಿಸಿದೆ.

Advertisement

ಮನೆಯಲ್ಲಿ  ವಾರಿಜಾ ಒಬ್ಬರೇ  ವಾಸಿಸುತ್ತಿದ್ದು, ಮಂಗಳವಾರ ಬೆಳಗ್ಗೆ ಕಲ್ಲಡ್ಕದಲ್ಲಿರುವ ಮಗಳ ಮನೆಗೆ ಹೋಗಿದ್ದರು ಎನ್ನಲಾಗಿದೆ. ಮಧ್ಯರಾತ್ರಿಯ ಬಳಿಕ ಬೆಂಕಿ ಮೊದಲಿಗೆ ಮನೆಯ ಹಿಂಬದಿಯಲ್ಲಿನ ಕಟ್ಟಿಗೆ ಸಂಗ್ರಹದ ಕೊಟ್ಟಿಗೆಗೆ ತಗುಲಿ ಕಟ್ಟಿಗಗಳುೆ  ಸುಟ್ಟುಧಿಹೋಗಿವೆ. ಸನಿಹದಲ್ಲಿದ್ದ ಫೈಬರ್‌ ನೀರಿನ ತೊಟ್ಟಿ ಕರಗಿಹೋಗಿದೆ. 

ಬಳಿಕ ಬೆಂಕಿ ಮನೆಗೂ ವ್ಯಾಪಿಸಿ ಹಂಚಿನ ಮನೆ ಅರ್ಧ ಸುಟ್ಟು ಬೂದಿಯಾಗಿದೆ. ಬೆಂಕಿ ಕಂಡು  ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದು  ಸಿಬಂದಿ ಮನೆಪೂರ್ತಿ ಸುಟ್ಟುಹೋಗುವುದನ್ನು ತಪ್ಪಿಸಿದರು.  ಘಟನೆಗೆ ಕಾರಣ ತಿಳಿದು ಬಂದಿಲ್ಲ 
ಬೆಳ್ತಂಗಡಿ ತಹಸೀಲ್ದಾರ್‌, ಅಳದಂಗಡಿ ಗ್ರಾ.ಪಂ.ಅಧ್ಯಕ್ಷರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next