Advertisement

ಸುಟ್ಟು ಭಸ್ಮವಾದ ಗುಡಿಸಲು: 6 ಮೇಕೆ ಬಲಿ, ಲಕ್ಷಾಂತರ ರೂ ನಷ್ಟ

02:19 PM Feb 24, 2020 | keerthan |

ವಿಜಯಪುರ: ಆಕಸ್ಮಿಕ ಅಗ್ನಿ ದುರಂತದಲ್ಲಿ ವಿಜಯಪುರ ಗ್ರಾಮೀಣ ಠಾಣಾ ವ್ಯಾಪ್ತಿಯ ಉತ್ನಾಳ ಗ್ರಾಮದಲ್ಲಿ ಮನೆಯೊಂದು ಸಂಪೂರ್ಣ ಸುಟ್ಟು ಭಸ್ಮವಾಗಿದೆ.

Advertisement

ಹನುಮಂತ ಭೀಮಪ್ಪ ಭಜಂತ್ರಿ ಎಂಬುವರಿಗೆ ಸೇರಿದ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಬೆಂಕಿ ಹೊತ್ತಿ ಕೊಂಡಿದೆ.

ಅಗ್ನಿ ಅವಘಡದಿಂದ ಮನೆಯಲ್ಲಿದ್ದ 4 ಕುರಿ, 2 ಮೇಕೆ ಸಜೀವ ದಹನವಾಗಿವೆ. ಘಟನೆಯಲ್ಲಿ 1 ಲಕ್ಷ ರೂ. ನಗದು, 25 ಕ್ವಿಂಟಾಲ್ ಧವಸ ಧಾನ್ಯ, 2 ದ್ವಿಚಕ್ರ ವಾಹನಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ಇದಲ್ಲದೇ ಮನೆಯಲ್ಲಿದ್ದ ಅಮೂಲ್ಯ ದಾಖಲೆಗಳೂ ಬೆಂಕಿಯಲ್ಲಿ ಸುಟ್ಟು ಕರಕಲಾಗಿವೆ.

ಸುದ್ದಿ ತಿಳಿಯುತ್ತಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಇತರೆ ಮನೆಗಳಿಗೆ ಬೆಂಕಿ ವ್ಯಾಪಿಸದಂತೆ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next