Advertisement

ಘಾಜಿಯಾಬಾದ್ ನಲ್ಲಿ ಅಗ್ನಿ ಅವಘಡ: ಅಪಾಯದಲ್ಲಿ 200ಕ್ಕಿಂತ ಹೆಚ್ಚು ಸ್ಲಂ ಪ್ರದೇಶಗಳು !

08:37 AM Nov 04, 2020 | Mithun PG |

ಘಾಜಿಯಾಬಾದ್: ಇಲ್ಲಿನ ಸಾಹಿಬಾ ಬಾದ್‌ ಭೂಪುರ ಕೃಷ್ಣ ವಿಹಾರ್ ಪ್ರದೇಶದಲ್ಲಿ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿದ್ದು, ಸುಮಾರು 200 ಕೊಳೆಗೇರಿಗಳು (ಸ್ಲಂ-ಪ್ರದೇಶ)  ಅಪಾಯದಲ್ಲಿದೆ ಎಂದು ವರದಿಯಾಗಿದೆ.

Advertisement

ಸ್ಥಳಕ್ಕೆ ಪೊಲೀಸರು ಮತ್ತು  ಅಗ್ನಿಶಾಮಕ ದಳದವರು  ದೌಡಾಯಿಸಿದ್ದು, ಈ ಪ್ರದೇಶದಲ್ಲಿ ವಾಸಿಸುವ ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸ್ಥಳದಲ್ಲಿ ಇನ್ನೂ ಕೂಡ 30 ಅಗ್ನಿಶಾಮಕ ವಾಹನಗಳು ಕಾರ್ಯನಿರ್ವಹಿಸುತ್ತಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ವರದಿಯಾಗಿದೆ.

ಇದನ್ನೂ ಓದಿ: ಅಮೆರಿಕ ಮತಸಮರ: ಟ್ರಂಪ್, ಬೈಡೆನ್ ನಡುವೆ ತೀವ್ರ ಹಣಾಹಣಿ, ಯಾರಾಗಲಿದ್ದಾರೆ ವಿಶ್ವದ ದೊಡ್ಡಣ್ಣ?

ಈ ಭಾರೀ ಬೆಂಕಿ ಅವಘಢಕ್ಕೆ ಕಾರಣವೇನು ಎಂಬುದು ತಿಳಿದುಬಂದಿಲ್ಲ. ಪರಿಸ್ಥಿತಿಯನ್ನು ಶೀಘ್ರವಾಗಿ ನಿಯಂತ್ರಣಕ್ಕೆ ತರುವುದು ನಮ್ಮ ಆದ್ಯತೆಯಾಗಿದೆ. ಬೆಂಕಿಯಲ್ಲಿ ಅನೇಕ ಸ್ಲಂ ಪ್ರದೇಶಗಳು ನಾಶವಾಗಿವೆ. ಹಲವರನ್ನು ರಕ್ಷಿಸಿ , ಅವರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲಾಗಿದೆ. ಮಂಗಳವಾರ (ನ.3) ರಾತ್ರಿ 10ರ ಸುಮಾರಿಗೆ ನಮಗೆ ಕರೆ ಬಂದಿತು, ಅದರ ನಂತರ ಯುಪಿ ಪೊಲೀಸ್ ಮತ್ತು ಅಗ್ನಿಶಾಮಕ ದಳದ ತಂಡ ಸ್ಥಳಕ್ಕೆ ಧಾವಿಸಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ನೀರಜ್ ಕುಮಾರ್ ಜಾದೌನ್ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next