Advertisement

ಉಪ್ಪುಂದ: ಅಗ್ನಿ ಆಕಸ್ಮಿಕ; ಸುಟ್ಟು ಹೋದ ಹಟ್ಟಿ , ಗುಜಿರಿ ಅಂಗಡಿ

12:33 PM Nov 01, 2018 | |

ಉಪ್ಪುಂದ: ಸ್ನಾನಕ್ಕೆಂದು ನೀರು ಕಾಯಿಸುವ ಸಂದರ್ಭ ಬೆಂಕಿಯ ಕಿಡಿ ತಗುಲಿ ದನದ ಹಟ್ಟಿ ಮತ್ತು ಪಕ್ಕದ ಗುಜಿರಿ ಅಂಗಡಿ ಹೊತ್ತಿ ಉರಿದ ಘಟನೆ ರಾಷ್ಟೀಯ ಹೆದ್ದಾರಿ 66 ರ ಉಪ್ಪುಂದದಲ್ಲಿ ಗುರುವಾರ ಬೆಳಗಿನ ಜಾವ ನಡೆದಿದೆ. 

Advertisement

ಉಪ್ಪುಂದದ ಅರುಣ್ ಭಟ್ ಎಂಬವರಿಗೆ ಸೇರಿದ ಹಟ್ಟಿ ಇದಾಗಿದ್ದು, ಹಟ್ಟಿಯ ಮಾಡು ಮತ್ತು ವಿದ್ಯುತ್ ಉಪಕರಣಗಳು ಸಂಪೂರ್ಣ ಸುಟ್ಟು ಹೋಗಿವೆ. ಸುಮಾರು ಒಂದು ಲಕ್ಷ ರೂಪಾಯಿ ಮೌಲ್ಯದ ನಷ್ಟ ಉಂಟಾಗಿದೆ


ಎಂದು ಅಂದಾಜಿಸಲಾಗಿದೆ. ಅಗ್ನಿ ಶಾಮಕ ದಳ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next