Advertisement
ಆಯುಧ ಪೂಜೆ ದಿನದಂದು ರಿವಾಲ್ವರ್ ಸೇರಿದಂತೆ ಇನ್ನಿತರೆ ಮಾರಕಾಸ್ತ್ರಗಳನ್ನಿಟ್ಟು ಪೂಜೆ ಸಲ್ಲಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಅಪರಾಧ ವಿಭಾಗ (ಸಿಸಿಬಿ), ಮುತ್ತಪ್ಪ ರೈ ಹಾಗೂ ಬ್ಲ್ಯಾಕ್ ಕ್ಯಾಟ್ ಸೆಕ್ಯೂರಿಟಿ ಏಜೆನ್ಸಿ ಮಾಲೀಕ ಕೆ. ವಸಂತಪೂವಯ್ಯ ಅವರ ವಿಚಾರಣೆ ನಡೆಸಿದಾಗ ಈ ವಿಚಾರ ಬಯಲಿಗೆ ಬಂದಿದೆ.
Related Articles
Advertisement
ಆದರೆ, ಅನಾರೋಗ್ಯ ಹಿನ್ನೆಲೆ ರೈ ವಿಚಾರಣೆಗೆ ಆಗಮಿಸಿರಲಿಲ್ಲ ಎಂದು ತಿಳಿದು ಬಂದಿದೆ. ಮುತ್ತಪ್ಪ ರೈ ವಿಚಾರಣೆಗೆ ಗೈರಾಗಿದ್ದರ ಸಂಬಂಧ ಅವರ ವಕೀಲ ನಾರಾಯಣಸ್ವಾಮಿ, ಮುತ್ತಪ್ಪ ರೈ ಅವರು ಕಳೆದ ಬಾರಿ ಸತತ 8 ಗಂಟೆಗಳ ಕಾಲ ವಿಚಾರಣೆ ಎದುರಿಸಿದ್ದರಿಂದ ಸ್ವಲ್ಪ ಬಳಲಿದ್ದಾರೆ.
ಹೀಗಾಗಿ, ವಿಚಾರಣೆಗೆ ಬಂದಿಲ್ಲ. ಈ ಕುರಿತು ಸಿಸಿಬಿ ಅಧಿಕಾರಿಗಳಿಗೆ ದಾಖಲೆಗಳನ್ನು ನೀಡಿದ್ದೇನೆ. ಸಿಸಿಬಿ ಅಧಿಕಾರಿಗಳು ವಿಚಾರಣೆಗೆ ಸೂಚಿಸುವ ದಿನ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ. ಜತೆಗೆ ಶಸ್ತ್ರಾಸ್ತ್ರಗಳು ಕಾನೂನು ಬದ್ಧವಾಗಿವೆ. ಯಾವುದೇ ಲೋಪವಾಗಿಲ್ಲ ಎಂದೂ ಹೇಳಿದ್ದಾರೆ.
ನೋಟಿಸ್ ಜಾರಿ: ಅ.17ರಂದು ಪೂಜೆಗಿಟ್ಟಿದ್ದ ಶಸ್ತ್ರಾಸ್ತ್ರಗಳ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಈ ಕುರಿತಂತೆ ದಾಖಲೆಗಳ ಸಮೇತ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಪೊಲೀಸರು ನೋಟಿಸ್ ಜಾರಿಗೊಳಿಸಿದ್ದರು.