Advertisement

ಕೇಸರಿಬಾವುಟ ಹಿಡಿದ ಗುಂಪಿನಿಂದ ಅನ್ಯಕೋಮಿನ ವ್ಯಕ್ತಿಯ ಕಾರು ಜಖಂ: ಹರ್ಷ ಸಹೋದರಿ ವಿರುದ್ದ FIR

11:16 AM Oct 24, 2022 | Team Udayavani |

ಶಿವಮೊಗ್ಗ: ಅನ್ಯಕೋಮಿನ ವ್ಯಕ್ತಿಗೆ ಸೇರಿದ ಕಾರನ್ನು ಜಖಂಗೊಳಿಸಿದ ಆರೋಪದಡಿ ಹರ್ಷ ಸಹೋದರಿ ಅಶ್ವಿನಿ ಸೇರಿ 10-15 ಜನರ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ.

Advertisement

ಆಜಾದ್ ನಗರದಲ್ಲಿ ಸಯ್ಯದ್ ಪರ್ವೀಜ್ ಎಂಬುವರ ಇನ್ನೋವಾ ಕಾರಿಗೆ ಹಾನಿ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ಕಲ್ಲಪ್ಪನಕೇರಿಯಿಂದ ಜೈ ಶ್ರೀರಾಮ್ ಎಂದು ಕೂಗುತ್ತಾ ಕೇಸರಿ ಬಾವುಟ ಹಿಡಿದುಕೊಂಡು ಗುಂಪಾಗಿ ಬಂದ ಬೈಕ್ ಸವಾರರು ಕಾರಿನ ಎಡ ಭಾಗದ ಹೆಡ್ ಲೈಟ್, ಸೈಡ್ ಡೋರ್, ಬ್ಯಾಕ್ ಸೈಡ್ ಮಡ್ ಗಾರ್ಡ್ ಜಖಂ ಮಾಡಿದ್ದಾರೆ ಎಂದು ಕಾರು ಮಾಲೀಕ ಪರ್ವೀಜ್ ದೂರು ದಾಖಲು ಮಾಡಿದ್ದಾರೆ.

ಇದನ್ನೂ ಓದಿ:ರೋಹಿತ್ ಶರ್ಮಾ ಹೆಸರಲ್ಲಿದ್ದ ವಿಶ್ವದಾಖಲೆ ಮುರಿದ ಕಿಂಗ್ ಕೊಹ್ಲಿ

ಸೀಗೆಹಟ್ಟಿ ನಿವಾಸಿ ಇತ್ತೀಚೆಗೆ ಕೊಲೆಯಾದ ಹಿಂದೂ ಕಾರ್ಯಕರ್ತ ಹರ್ಷ ಸಹೋದರಿ ಅಶ್ವಿನಿ ಮತ್ತು 10 ರಿಂದ 15 ಜನರ ಗುಂಪಿನ ಮೇಲೆ ಆರೋಪ ಮಾಡಲಾಗಿದೆ.

Advertisement

ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next