Advertisement

Bagalkot: ಆತ್ಮಹತ್ಯೆಗೆ ಯತ್ನಿಸಿದವ ಜನರನ್ನು ಕಂಡು ಪರಾರಿ !

06:04 PM Dec 19, 2023 | Team Udayavani |

ರಬಕವಿ-ಬನಹಟ್ಟಿ: ಜೀವನದಲ್ಲಿ ಸಮಸ್ಯೆ ಎದುರಿಸುತ್ತಿದ್ದ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಳ್ಳುವ ಸಂದರ್ಭ ಜನರನ್ನು ಕಂಡು ಗಿಡಕ್ಕೆ ಹಾಕಿದ ಹಗ್ಗ ಹಾಗೂ  ಬಂದಿದ್ದ ಬೈಕ್ ಅನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾದ ವಿಚಿತ್ರ ಘಟನೆಯೊಂದು ಬಾಗಲಕೋಟೆ ಜಿಲ್ಲೆ ಬನಹಟ್ಟಿಯಲ್ಲಿ ನಡೆದಿದೆ.

Advertisement

ಬನಹಟ್ಟಿಯ ಸೋಮವಾರ ಪೇಟೆ ಸಮಸ್ತ ದೈವ ಮಂಡಳಿಯ ಹಿಂದೂ ರುದ್ರಭೂಮಿಯಲ್ಲಿ ಮಂಗಳವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಬೈಕ್ ಸವಾರನೋರ್ವ ಹಗ್ಗದ ಸಮೇತ ಒಳಗೆ ನುಗ್ಗಿದ್ದಾನೆ. ಅಂತ್ಯಸಂಸ್ಕಾರ ಸಂದರ್ಭ ನಿರ್ಮಿಸಲಾದ ವಿಶ್ರಾಂತಿ ಜಾಗೆಯ ಕಬ್ಬಿನ ಸಲಾಕೆಗೆ ಹಗ್ಗ ಬಿಗಿದು ಅದಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವ ಸಂದರ್ಭ ದೂರದಿಂದ ಮೂರ‍್ನಾಲ್ಕು ಜನರು ಅದನ್ನು ವೀಕ್ಷಿಸಿದ್ದಾರೆ. ಅಲ್ಲಿಂದಲೇ ವ್ಯಕ್ತಿಯ ವಿಚಾರಣೆಗೆಂದು ದೊಡ್ಡ ಧ್ವನಿಯಲ್ಲಿ ಮಾತನಾಡಿಸುತ್ತಾ  ಆತನಿದ್ದ ಜಾಗೆಯತ್ತ ತೆರಳುತ್ತಿದ್ದಂತೆ ವ್ಯಕ್ತಿ ತನ್ನ ಬೈಕ್, ಹೆಲ್ಮೇಟ್ ಹಾಗು ಬಟ್ಟೆ ತುಂಬಿದ ಚೀಲವನ್ನು ಅಲ್ಲಿಯೇ ಬಿಟ್ಟು ಸ್ಥಳದಿಂದ ಕಾಲ್ಕಿತ್ತಿದ್ದಾನೆ.

ಸ್ಥಳಕ್ಕೆ ಆಗಮಿಸಿದ ಪೊಲೀಸರು ಸ್ಥಳದಲ್ಲಿದ್ದ ಬೈಕ್ ವಶಪಡಿಸಿಕೊಂಡಿದ್ಧಾರೆ. ಬೈಕ್‌ ಬನಹಟ್ಟಿಯ ನೀರಿನ ಟಾಂಕಿ ಹತ್ತಿರದ ಗಣೇಶ ಲಾಳಿ ಎಂಬುವರಿಗೆ ಸೇರಿದ್ದಾಗಿದ್ದು, ವ್ಯಕ್ತಿ ಯಾರೆಂಬುದು ಸ್ಪಷ್ಟವಾಗಿಲ್ಲ. ಈ ಕುರಿತು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಇದನ್ನೂ ಓದಿ: Hinduism ರಕ್ಷಣೆ ಮಾಡುವುದು ಅಗತ್ಯವಾಗಿದೆ: ಶಾಸಕ ಸಿದ್ದು ಸವದಿ

Advertisement

Udayavani is now on Telegram. Click here to join our channel and stay updated with the latest news.

Next