Advertisement

ಯಕ್ಷಗಾನ ಕಲಾವಿದ ವಾಮನ ಕುಮಾರ್ ಕುಟುಂಬಕ್ಕೆ ಆರ್ಥಿಕ ನೆರವು

08:08 PM Feb 05, 2022 | Team Udayavani |

ಉಡುಪಿ: ಕಳೆದ ತಿಂಗಳು ವಾಹನ ಅಪಘಾತದಲ್ಲಿ ನಿಧನ ಹೊಂದಿದ ಹಿರಿಯಡಕ ಮೇಳದ ಪ್ರಸಿದ್ಧ ಕಲಾವಿದ ವೇಣೂರು ವಾಮನ ಕುಮಾರ್ ಅವರ ಪತ್ನಿ ಆಶಾ ಇವರಿಗೆ ಉಡುಪಿಯ ಯಕ್ಷಗಾನ ಕಲಾರಂಗದ ವತಿಯಿಂದ 50 ಸಾವಿರ ರೂ.  ಸಾಂತ್ವನ ನಿಧಿಯನ್ನು ನೀಡಲಾಯಿತು.

Advertisement

ಫೆ.04 ರಂದು ಹಿರಿಯಡಕದಲ್ಲಿ ಮೇಳದ ವೇದಿಕೆಯಲ್ಲಿ ನೆರವನ್ನು ನೀಡಲಾಯಿತು. ಯಕ್ಷಗಾನ ಕಲಾರಂಗದ ಉಪಾಧ್ಯಕ್ಷರಾದ ಎಸ್. ವಿ. ಭಟ್, ಮೇಳದ ಯಜಮಾನರಾದ ಪಿ. ಕಿಶನ್ ಹೆಗ್ಡೆ, ಕಾರ್ಯದರ್ಶಿ ಮುರಲಿ ಕಡೆಕಾರ್, ಜತೆ ಕಾರ್ಯದರ್ಶಿ ನಾರಾಯಣ ಎಮ್. ಹೆಗಡೆ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಶ್ರೀನಿವಾಸ ರಾವ್ ನೇತೃತ್ವದಲ್ಲಿ ಹಿರಿಯಡಕದ ನಾಗರಿಕರಿಂದ ಸಂಗ್ರಹಿಸಿದ ಒಂದು ಲಕ್ಷ ರೂಪಾಯಿ ಹಾಗೂ ಮೇಳದ ಕಲಾವಿದರಿಂದ ಸಂಗ್ರಹಿಸಿದ ಮೂವತ್ತೆರಡು ಸಾವಿರ ರೂಪಾಯಿಯ ನಿಧಿಯನ್ನು ಕುಟುಂಬಕ್ಕೆ ನೀಡಲಾಯಿತು.

ಪಿ. ಕಿಶನ್ ಹೆಗ್ಡೆಯವರು ವಾಮನ ಕುಮಾರ ಅವರ ಈರ್ವರು ಮಕ್ಕಳ ಮುಂದಿನ ವಿದ್ಯಾಭ್ಯಾಸದ ವೆಚ್ಚವನ್ನು ಭರಿಸುವುದಾಗಿ ಹೇಳಿದರು.

ಹಿರಿಯಡಕ ದೇವಳದ ಅರ್ಚಕರಾದ ರಂಗನಾಥ ಭಟ್, ಪೂರ್ಣಿಮಾ ಸುರೇಶ್ ಹಾಗೂ ಕಲಾವಿದರ ಪ್ರತಿನಿಧಿಯಾದ ಸಿದ್ಧಕಟ್ಟೆ ಸದಾಶಿವ ಶೆಟ್ಟಿ ನುಡಿನಮನ ಸಲ್ಲಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next