Advertisement

Finance Minister ನಿರ್ಮಲಾ ನುರಿತ ಆರ್ಥಿಕ ತಜ್ಞೆ ಅಲ್ಲ: ಟಿಎಂಸಿ ಸಂಸದ ರಾಯ್‌

12:45 AM Jul 26, 2024 | Team Udayavani |

ಹೊಸದಿಲ್ಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ತರಬೇತಿ ಪಡೆದ ಆರ್ಥಿಕ ತಜ್ಞೆಯಲ್ಲ ಎಂದು ಟಿಎಂಸಿ ಸಂಸದ ಸುಗತ ರಾಯ್‌ ಹೇಳಿದ್ದಾರೆ. ಕೇಂದ್ರ ಬಜೆಟ್‌ ಕಲಾಪದ ಚರ್ಚೆಯಲ್ಲಿ ಭಾಗಿಯಾದ ಸಂಸದ, ಸಚಿವೆ ನಿರ್ಮಲಾ ಪ್ರಧಾನಿ ಕಚೇರಿ ನೀಡಿದ ಸಲಹೆಗಳನ್ನಾಧರಿಸಿ ಬಜೆಟ್‌ ಮಂಡಿಸಿದ್ದಾರೆ. ಅವರಿಗೆ ಬಜೆಟ್‌ ಬಗ್ಗೆ ಸ್ವಂತ ಆಲೋಚನೆ ಇಲ್ಲ. ಇದು ಜನಸಾಮಾನ್ಯರ ಬಜೆಟ್‌ ಅಲ್ಲ, “ಬಿಹಾರ-ಆಂಧ್ರಪ್ರದೇಶ’ದ ಬಜೆಟ್‌. ನಿರ್ಮಲಾ, ಮನಮೋಹನ್‌ ಸಿಂಗ್‌ರಂತೆ ಆಕ್ಸ್‌ ಫ‌ರ್ಡ್‌ ನಲ್ಲಿ ಪದವಿ ಪಡೆದಿಲ್ಲ. ಚಿದಂಬರಂ ಅವರಂತೆ ಹಾರ್ವರ್ಡ್‌ನಲ್ಲಿ ಪದವಿ ಪಡೆದಿಲ್ಲ. ಅವರಿಂದ ನಾವು ಇನ್ನೇನು ನಿರೀಕ್ಷಿಸಬಹುದು ಎಂದು ಟೀಕಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next