Advertisement

MP ಎಂಜಿನಿಯರ್‌ ರಶೀದ್‌ ಪ್ರಮಾಣ ವಚನ ಸ್ವೀಕಾರಕ್ಕೆ ಕೊನೆಗೂ ಎನ್‌ಐಎ ಅಸ್ತು

01:12 AM Jul 02, 2024 | Team Udayavani |

ಶ್ರೀನಗರ: ಜೈಲಿನಲ್ಲಿದ್ದುಕೊಂಡೇ ಲೋಕಸಭೆ ಚುನಾ ವಣೆಯಲ್ಲಿ ಬಾರಾಮುಲ್ಲಾ ಕ್ಷೇತ್ರದಿಂದ ಸ್ಪರ್ಧಿಸಿ ಜಯಸಾಧಿಸಿದ ಶೇಖ್‌ ಅಬ್ದುಲ್‌ ರಶೀದ್‌ ಅಲಿ ಯಾಸ್‌ ಎಂಜಿನಿಯರ್‌ ರಶೀದ್‌ ಜು.5ರಂದು ಸಂಸದರಾಗಿ ಪ್ರಮಾಣವಚನ ಸ್ವೀಕರಿಸಲು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಸೋಮವಾರ ಸಮ್ಮತಿ ನೀಡಿದೆ.

Advertisement

ಭಯೋತ್ಪಾದಕ ಕೃತ್ಯಗಳಿಗೆ ಹಣಕಾಸು ನೆರವು ನೀಡಿದ ಆರೋಪದಲ್ಲಿ 2017ರಲ್ಲಿ ರಶೀದ್‌ನನ್ನು ಬಂಧಿಸಲಾಗಿದೆ. ಪ್ರಸಕ್ತ ತಿಹಾರ್‌ ಜೈಲಿನಲ್ಲಿದ್ದಾನೆ. ಸಂಸದನಾಗಿ ಪ್ರಮಾಣ ಸ್ವೀಕರಿಸಲು ಅನುವಾಗುವಂತೆ ಮಧ್ಯಾಂತರ ಜಾಮೀನು ನೀಡಬೇಕೆಂದು ದಿಲ್ಲಿಯ ವಿಶೇಷ ಕೋರ್ಟ್‌ನಲ್ಲಿ ರಶೀದ್‌ ಅರ್ಜಿ ಸಲ್ಲಿಸಿದ್ದರು. ಈ ಕುರಿತಂತೆ ಪ್ರತಿಕ್ರಿಯೆ ಸಲ್ಲಿಸುವಂತೆ ಎನ್‌ಐಎಗೆ ನ್ಯಾಯಾಲಯ ಸೂಚಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next