Advertisement
ದುಮಿಂಗ್ ಎಂ. ಸಿದ್ದಿ ಕಳೆದ 15 ವರ್ಷಗಳಿಂದ ಸೇನೆಯಲ್ಲಿ ಯೋಧನಾಗಿದ್ದ. ದುಮಿಂಗ್ ಸಿದ್ದಿ ಪಿಯು ಓದಿದ್ದು ಕಾರವಾರದ ಸರ್ಕಾರಿ ಪಿಯು ಕಾಲೇಜಿನಲ್ಲಿ. ಮೂಲತಃ ಯಲ್ಲಾಪುರದವರು. ದುಮ್ಮಿಂಗ್ ಕುಟುಂಬ ಕಳೆದ ಎರಡು ದಶಕಗಳ ಹಿಂದೆ ಕಾರವಾರ ಸಮೀಪದ ಮಖೇರಿ ಗ್ರಾಮದಲ್ಲಿ ನೆಲೆ ನಿಂತಿತ್ತು.
ದುಮ್ಮಿಂಗ್ ಸೋಮವಾರ ಸಂಜೆ ಅಥವಾ ಮಂಗಳವಾರ ಕಾರವಾರಕ್ಕೆ ತಲುಪಲಿದ್ದರು. ಆತನ ಮಗನ ಹುಟ್ಟಿದ ಹಬ್ಬದ ಸಂಭ್ರಮದಲ್ಲಿ ಭಾಗವಹಿಸಬೇಕಿದ್ದ ಅವರು ಶವವಾಗಿ ಮನೆ ತಲುಪಿದ್ದು, ಇಡೀ ಕುಟುಂಬದಲ್ಲಿ ಮೌನ ಆವರಿಸಿತ್ತು. ಆಕಾಶ ಕಳಚಿಬಿದ್ದ ಅನುಭವ ಅವರ ಮಕ್ಕಳಿಗೆ ಹಾಗೂ ಪತ್ನಿಗೆ ಆಗಿತ್ತು. ದುಮ್ಮಿಂಗ್ ಅವರು ಹೊಸ ಮನೆ ಕಟ್ಟಿಸುತ್ತಿದ್ದು, ಅದು ಸಹ ಮುಕ್ತಾಯ ಹಂತದಲ್ಲಿತ್ತು. ಕ್ರಿಸ್ಮಸ್ ವೇಳೆಗೆ ಹೊಸ ಮನೆ ಪ್ರವೇಶಕ್ಕೆ ಅವರು ಕನಸು ಕಂಡಿದ್ದರು.
Related Articles
Advertisement
ಸಚಿವ ಹೆಗಡೆ ಕಂಬನಿಶಿರಸಿ: ಪಂಜಾಬ ರಾಜ್ಯದ ಪಟಾಣಕೋಟ್ನಲ್ಲಿ ಯೋಧರಾಗಿ ಸೇವೆ ಸಲ್ಲಿಸುತ್ತಿದ್ದ ಕಾರವಾರ ಮೂಲದ ಯೋಧ ದುಮ್ಮಿಂಗ್ ಸಿದ್ದಿ ಅಕಾಲಿಕ ಮರಣಕ್ಕೆ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಸಂತಾಪ ವ್ಯಕ್ತಪಡಿಸಿದ್ದಾರೆ. ದುಮ್ಮಿಂಗ್ ಸಿದ್ದಿ ಇವರು ಕಳೆದ 15 ವರ್ಷಗಳಿಂದ ದೇಶ ಕಾಯುವ ಕಾಯಕದಲ್ಲಿ ತಲ್ಲೀನರಾಗಿದ್ದು, ಅವರ ಬಲಿದಾನವನ್ನು ಎಂದಿಗೂ ಸಮಾಜ ನೆನಪಿಡುತ್ತದೆ. ಅವರ ನಿಧನವು ಭಾರತೀಯ ಸೇನೆಗೆ ಹಾಗೂ ದೇಶಕ್ಕೆ ತುಂಬಲಾರದ ನಷ್ಟವುಂಟಾಗಿದ್ದು, ಅವರ ಆತ್ಮಕ್ಕೆ ಸದ್ಗತಿಯನ್ನೂ ಹಾಗೂ ಅವರ ಕುಟುಂಬಕ್ಕೆ ದುಃಖ ಸಹಿಸುವ ಶಕ್ತಿಯನ್ನು ಭಗವಂತ ನೀಡಲೆಂದು ಸಚಿವರು ಪ್ರಾರ್ಥಿಸಿದ್ದಾರೆ. ದೇಶಪಾಂಡೆ ಸಂತಾಪ
ಹಳಿಯಾಳ: ಯೋಧರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ದುಮ್ಮಿಂಗ್ ಸಿದ್ದಿ ನಿಧನರಾದ ಸುದ್ದಿ ತುಂಬಾ ದುಃಖದ ಸಂಗತಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ. ದೇಶಪಾಂಡೆ ಸಂತಾಪ ಸೂಚಿಸಿದ್ದಾರೆ. ಕಾರವಾರದ ಮಾಖೇರಿ ಗ್ರಾಮದವಾರದ ಡುಮ್ಮಿಂಗ್ ದೂರದ ಊರುಗಳಲ್ಲಿ 15 ವರ್ಷಗಳ ಕಾಲ ಸೇವೆ ಸಲ್ಲಿಸಿ ಹುತಾತ್ಮರಾಗಿದ್ದು, ಅವರ ಕೊಡುಗೆಯನ್ನು ಈ ರಾಷ್ಟ್ರವು ಸದಾ ನೆನಪಿನಲ್ಲಿಟ್ಟುಕೊಂಡಿರಲಿದೆ ಎಂದಿದ್ದಾರೆ. ಮಗನನ್ನು ಕಳೆದುಕೊಂಡಿರುವ ಕುಟುಂಬಕ್ಕೆ ನೋವನ್ನು ಸಹಿಸುವ ಶಕ್ತಿ ಭಗವಂತ ನೀಡಲಿ ಹಾಗೂ ಅಗಲಿದ ಸೈನಿಕನ ಆತ್ಮಕ್ಕೆ ಪರಮಾತ್ಮನು ಶಾಂತಿ ಕೊಡಲೆಂದು ಪ್ರಾರ್ಥಿಸಿದ್ದಾರೆ.