Advertisement

ಹುತಾತ್ಮ ಯೋಧರಿಗೆ ಅಂತಿಮ ವಿದಾಯ

06:40 AM Jul 12, 2018 | |

ಕಾರವಾರ/ಖಾನಾಪುರ: ಛತ್ತೀಸಗಡನ ಬಸ್ತರ ವಿಭಾಗದ ಕಾಂಕೇರ ಬಳಿ ಸೋಮವಾರ ನೆಲಬಾಂಬ್‌ ಸ್ಫೋಟದಲ್ಲಿ ವೀರಮರಣ ಹೊಂದಿದ ಬಿಎಸ್‌ಎಫ್‌ ಯೋಧರಾದ ವಿಜಯಾನಂದ ನಾಯ್ಕ ಹಾಗೂ ಸಂತೋಷ ಗುರವ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ಬುಧವಾರ ನೆರವೇರಿತು.

Advertisement

ಬೆಳಗ್ಗೆ 9ಕ್ಕೆ ಜಿಲ್ಲಾಧಿಕಾರಿ ಕಚೇರಿಗೆ ವಿಜಯಾನಂದ ನಾಯ್ಕ ಪಾರ್ಥಿವ ಶರೀರ ಆಗಮಿಸುತ್ತಿದ್ದಂತೆ ಜಿಲ್ಲಾಧಿಕಾರಿ ಎಸ್‌.ಎಸ್‌. ನಕುಲ್‌, ಎಸ್ಪಿ ವಿನಾಯಕ ಪಾಟೀಲ ಸೇರಿ ಹಲವು ಗಣ್ಯರು ಗೌರವ ಸಲ್ಲಿಸಿದರು. ದಿವೇಕರ ಕಾಲೇಜಿನ ಸಮೀಪದ ಸಕಲಸರ್ಕಾರಿ ಗೌರವದೊಂದಿಗೆ ಅಂತ್ಯಸಂಸ್ಕಾರ ನೆರವೇರಿಸ ಲಾಯಿತು.

ಸಂತೋಷ ಗುರವ ಅಂತ್ಯಕ್ರಿಯೆ ಖಾನಾಪುರ ಹಲಗಾ ಗ್ರಾಮದ ರುದ್ರಭೂಮಿಯಲ್ಲಿ ನೆರವೇರಿತು. 11 ಗಂಟೆಯ ಸುಮಾರಿಗೆ ಹಲಗಾ ಗ್ರಾಮಕ್ಕೆ ಆಗಮಿಸಿದ ಪಾರ್ಥಿವ ಶರೀರಕ್ಕೆ ಪೂಜೆ ಸಲ್ಲಿಸಿ ನಮನ ಅರ್ಪಿಸಿದ ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು. ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಪಾಲ್ಗೊಂಡು ಸಂತೋಷ ಗುರವ ಅಮರ ರಹೇ ಎಂದು ಘೋಷವಾಕ್ಯಗಳನ್ನು ಮೊಳಗಿಸಿದರು.ಸಾವಿರಾರು ಜನರು ಹುತಾತ್ಮ ಯೋಧರಿಗೆ ಕಂಬನಿ ಮಿಡಿದರು.

Advertisement

Udayavani is now on Telegram. Click here to join our channel and stay updated with the latest news.

Next