Advertisement
ಹಿಂದೆಲ್ಲ ತೆಲುಗು ಸಿನೆಮಾಗಳೆಂದರೆ, ಅಲ್ಲೊಂದಿಲ್ಲೊಂದು ಫೈಟಿಂಗ್ ಸೀನ್, ಹಾಡುಗಳು, ದುಬಾರಿ ಸೆಟ್ ಗಳು, ವಿಎಫೆಕ್ಸ್ ನಿರೀಕ್ಷಿಸಿದರೆ, ಇತ್ತೀಚೆಗೆ ಬಿಡುಗಡೆಯಾದ ಚಿತ್ರ ಅವುಗಳಿಗೆ ತದ್ವಿರುದ್ಧ ಎಂದೇ ಹೇಳಬೇಕು. ಎಲ್ಲೂ ಅಶ್ಲೀಲ ದೃಶ್ಯಗಳಾಗಲೀ, ಅನಗತ್ಯ ಸಂಭಾಷಣೆಯಾಗಲೀ ಇಲ್ಲ ಎಂಬುದೇ ಈ ಚಿತ್ರದ ಪ್ಲಸ್ ಪಾಯಿಂಟ್.
Related Articles
Advertisement
ಈ ಚಿತ್ರದ ಇನ್ನೊಂದು ಮುಖ್ಯ ಪಾತ್ರ ಎಂದರೆ, ವೃದ್ಧ. ಇಡೀ ಚಿತ್ರದಲ್ಲಿ ಮೌನವಾಗಿ, ಕೊನೆಗೆ ಒಂದು ಮಾತು ಹೇಳಿ ನಮ್ಮನ್ನು ಚಿಂತನೆಗೆ ಹಚ್ಚುವ ಕಾರ್ಯ ಆತನದ್ದು. ಆತನೇ ನಾಯಕನಿಗೆ ಕಥೆಯನ್ನೊದಗಿಸುತ್ತಾನೆ. ಒಂದಲ್ಲಾ ಒಂದು ಅಡಚಣೆಗಳನ್ನು ದಾಟಿ ಸಿನೆಮಾ ಚಿತ್ರೀಕರಣ ಬಹುಭಾಗ ಮುಗಿಯಿತೆಂದುಕೊಂಡಾಗ, ಕಾಮೆರಾದ ಮಾಲಕಿ ಕಾಮೆರಾ ಹುಡುಕಿಕೊಂಡು ಬರುತ್ತಾಳೆ. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಶತ್ರುಗಳೂ ಊರಿನ ಅಭಿವೃದ್ಧಿಗೆ ನಾಯಕನಿಗೆ ಸಹಾಯ ಮಾಡಲು ಮುಂದೆ ಬರುತ್ತಾರೆ.
ಹಾಗಾದರೆ ನಾಯಕನ ಕನಸು ಕನಸಾಗಿಯೇ ಉಳಿಯುತ್ತದಾ..? ಅಥವಾ ನನಸಾಗುತ್ತದಾ ಎಂಬುದನ್ನು ಚಿತ್ರ ನೋಡಿಯೇ ತಿಳಿದರೇ ಒಳ್ಳೆಯದು. ಅದನ್ನೂ ಇಲ್ಲಿಯೇ ಹೇಳಿಬಿಟ್ಟು ಚಿತ್ರದ ಬಗೆಗಿನ ನಿಮ್ಮ ಕುತೂಹಲವನ್ನು ಕಿತ್ತುಕೊಳ್ಳುವ ಕೆಲಸಕ್ಕೆ ನಾನು ಮುಂದಾಗಲಾರೆ.
ಮೊದಲರ್ಧ ತಿಳಿ ಹಾಸ್ಯಗಳಿಂದ ಸಾಗುವ ಸಿನೆಮಾ ಮತ್ತೆ ಸ್ವಲ್ಪ ಭಾವನಾತ್ಮಕವಾಗಿದೆ. ಹಳ್ಳಿ ಜನರ ಜೀವನಶೈಲಿ, ಅವರ ಮುಗ್ಧತೆ, ಕನಸುಗಳೇ ಈ ಚಿತ್ರಕ್ಕೆ ಪುಷ್ಟಿ ನೀಡಿವೆ ಎಂದರೆ ತಪಾಗಲಾರದು. ಚಿತ್ರದಲ್ಲಿ ನಟಿಸಿದ ಪ್ರತಿಯೊಬ್ಬರೂ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದರೆ.
ಇಂತಹ ಉತ್ತಮ ಚಿತ್ರಗಳು ಥಿಯೇಟರ್ ನಲ್ಲೂ ಬಿಡುಗಡೆ ಆಗಲಿ.
ತಾರಾಗಣ: ತ್ರಿಶಾರಾ, ಪುಜಾರಿ ರಾಮ್ ಚರಣ್, ಉಮಾ ವೈ.ಜಿ, ದಾವಣಿ, ರಾಗ್ ಮಯೂರ್, ವಿಕಾಸ್ ವಸಿಶ್ಠ, ಸಂದೀಪ್ ವಾರಣಾಸಿ, ಸಿಂಧೂ ಶ್ರೀನಿವಾಸ್ ಮೂರ್ತಿ.
ತೇಜಸ್ವಿನಿ ಆರ್ ಕೆ
ಎಸ್ ಡಿ ಎಂ ಕಾಲೇಜ್ ಉಜಿರೆ
ಇದನ್ನೂ ಓದಿ : ಟೆಲಿಗ್ರಾಂ ವಾಟ್ಸ್ಯಾಪ್ ಗಿಂತ ಹೇಗೆ ಭಿನ್ನ.? ಟೆಲಿಗ್ರಾಂ ಬಗ್ಗೆ ನಿಮಗೆಷ್ಟು ಗೊತ್ತು..?