Advertisement

Vinod Dondale: ʼಕರಿಮಣಿʼ ಧಾರಾವಾಹಿ ನಿರ್ದೇಶಕ ನೇಣಿಗೆ ಶರಣು; ಸಾಲದ ಸುಳಿಯೇ ಕಾರಣ?

10:38 PM Jul 20, 2024 | Team Udayavani |

ಬೆಂಗಳೂರು: ಕನ್ನಡ ಕಿರುತೆರೆಯ ಖ್ಯಾತ ನಿರ್ದೇಶಕರೊಬ್ಬರು (Tv Serial Director) ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿರುವುದು ವರದಿಯಾಗಿದೆ.

Advertisement

ನಿರ್ದೇಶಕ ವಿನೋದ್ ದೊಂಡಾಲೆ (Vinod Dondale) ಆತ್ಮಹತ್ಯೆ ನಾಗಾರಬಾವಿಯ  ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಶನಿವಾರ(ಜು.20ರಂದು) ಮಾಡಿಕೊಂಡಿರುವುದು ವರದಿಯಾಗಿದೆ.

ಕನ್ನಡ ಕಿರುತೆರೆಯಲ್ಲಿ ‘ಕರಿಮಣಿ’, ‘ಮೌನರಾಗ’ ಸೇರಿದಂತೆ ‘ಶಾಂತಂ ಪಾಪಂ’ ಧಾರಾವಾಹಿಯ ಕೆಲ ಎಪಿಸೋಡ್​ಗಳನ್ನು ಕೂಡ ನಿರ್ದೇಶನ ಮಾಡಿರುವ ಅವರು ಚಂದನವನದಲ್ಲಿ ನಿರ್ದೇಶಕರಾಗಿ ಕಾಲಿಡಲು ಸಜ್ಜಾಗಿದ್ದರು. ಸತೀಶ್ ನೀನಾಸಂ ಅವರ ‘ಅಶೋಕ ಬ್ಲೇಡ್’ ಚಿತ್ರವನ್ನು ಅವರು ನಿರ್ದೇಶನ ಮಾಡುವ ತಯಾರಿಯಲ್ಲಿದ್ದರು.

ಮುಂದಿನ ವಾರದಿಂದ ಈ ಚಿತ್ರದ ಚಿತ್ರೀಕರಣ ಆರಂಭಗೊಳ್ಳಬೇಕಿತ್ತು. ಶುಕ್ರವಾರವಷ್ಟೇ (ಜು.19ರಂದು) ಚಿತ್ರತಂಡದ ಜೊತೆ ವಿನೋದ್ ಮಾತನಾಡಿ ಬಂದಿದ್ದರು ಎನ್ನಲಾಗಿದೆ.

Advertisement

ನಿರ್ಮಾಪಕರಾಗಿಯೂ ಗುರುತಿಸಿಕೊಂಡಿದ್ದ ಅವರು, ಸಾಲದ ಸುಳಿಯಲ್ಲಿ ಸಿಲುಕಿಕೊಂಡಿದ್ದರು ಎನ್ನುವ ಮಾತುಗಳು ಕೇಳಿ ಬರುತ್ತಿದೆ.

ಅಂದಾಜು 2-3 ಕೋಟಿ ರೂ. ಸಾಲ: ?:
ಅಶೋಕ ಬ್ಲೇಡ್‌ ಚಿತ್ರಕ್ಕೆ ವಿನೋದ್‌ ಸೇರಿ ಇಬ್ಬರು ನಿರ್ಮಾಪಕರಾಗಿದ್ದು, ವೃದ್ದಿ ಕ್ರಿಯೇಷನ್‌ ಬ್ಯಾನರ್‌ ಅಡಿ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದರು. ಈ ಚಿತ್ರಕ್ಕಾಗಿ ವಿನೋದ್‌ 2 ರಿಂದ 3 ಕೋಟಿ ರೂ. ಸಾಲ ಮಾಡಿಕೊಂಡಿದ್ದರು. ಮಾಡಿಕೊಂಡ ಸಾಲ ತೀರಿಸಲಾಗದೆ ಡೆತ್‌ನೋಟ್‌ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಸ್ನೇಹಿತರು ಹಾಗೂ ಸಂಬಂಧಿಕರು ಮಾಹಿತಿ ನೀಡಿದ್ದಾರೆ. ಸದ್ಯಕ್ಕೆ ಎಷ್ಟು ಸಾಲ ಮಾಡಿಕೊಂಡಿದ್ದರು ಎಂಬುದು ಗೊತ್ತಾಗಿಲ್ಲ. ಇದೀಗ ಅಹಜಸಾವು ಪ್ರಕರಣ ದಾಖಲಿಸಿಕೊಂಡಿರುವ ಚಂದ್ರಲೇಔಟ್‌ ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಡೆತ್‌ನೋಟ್‌ನಲ್ಲಿ ಏನಿದೆ?:
ನನ್ನ ಸಾವಿಗೆ ನಾನೇ ಕಾರಣರಲ್ಲ. ಬೇರೆ ಯಾರು ಕಾರಣರಲ್ಲ. ವೈಯಕ್ತಿಕ ವಿಚಾರಕ್ಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಡೆತ್‌ನೋಟ್‌ನಲ್ಲಿ ಉಲ್ಲೇಖೀಸಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next