Advertisement

ದಾಳಿಯ ಬಗ್ಗೆ ಚಿತ್ರ ನಟ ಅನಂತನಾಗ್‌ ಆಕ್ರೋಶ

04:25 AM Feb 17, 2019 | |

ಮಂಗಳೂರು: ಜಮ್ಮು ಕಾಶ್ಮೀರದ ಅವಂತಿಪೋರಾದಲ್ಲಿ ಭಾರತೀಯ ಸಿಆರ್‌ಪಿಎಫ್‌ ಯೋಧರ ಮೇಲೆ ಉಗ್ರರಿಂದ ನಡೆದ ದಾಳಿ ಆಕ್ರೋಶ ಉಂಟು ಮಾಡಿದೆ. ಸಿಟ್ಟಿನೊಂದಿಗೆ ಅಸಹಾಯಕತೆ ಕಾಡುತ್ತಿದೆ. ಈ ಘಟನೆಗಳ ಹಿಂದಿರುವ ಭಯೋತ್ಪಾದಕ ದೇಶ ಪಾಕಿಸ್ಥಾನಕ್ಕೆ ಮೋದಿ ನೇತೃತ್ವದ ಸರಕಾರ ತಕ್ಕ ಪಾಠ ಕಲಿಸಬೇಕು ಎಂದು ಹಿರಿಯ ಚಿತ್ರನಟ ಅನಂತನಾಗ್‌ ಹೇಳಿದರು.

Advertisement

ನಗರದ ಲಕ್ಷ್ಮೀ ಮೆಮೋರಿಯಲ್‌ ಹೋಟೆಲ್‌  ಮ್ಯಾನೇಜ್ಮೆಂಟ್ ಕಾಲೇಜಿನಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಉಗ್ರರನ್ನು ಹತ್ತಿಕ್ಕಲು ಸೇನೆಗೆ ಹೆಚ್ಚಿನ ಬಲ ನೀಡಬೇಕು. ಕಾಶ್ಮೀರದಲ್ಲಿ ಸೇಬು ಬೆಳೆಯುತ್ತದೆ. ಜತೆಗೆ ಭಯೋತ್ಪಾದನೆಯೂ ಹುಲುಸಾಗಿ ಬೆಳೆಯುತ್ತಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕು ಎಂದವರು ಹೇಳಿದರು.

ತುಳುವಿನಲ್ಲಿ ಬಣ್ಣ
ತುಳು ಚಲನಚಿತ್ರ ರಂಗ ಬೆಳೆಯುತ್ತಿದ್ದು, “ಇಂಗ್ಲಿಷ್‌’ ಚಲನಚಿತ್ರದ ಮುಖೇನ ಇದೇ ಮೊದಲ ಬಾರಿಗೆ ತುಳು ಭಾಷೆಯ ಚಿತ್ರವೊಂದಕ್ಕೆ ಬಣ್ಣ ಹಚ್ಚಿದ್ದೇನೆ ಎಂದು ಇದೇವೇಳೆ ಅನಂತ್‌ನಾಗ್‌ ಹೇಳಿದರು. ಚಲನಚಿತ್ರದಲ್ಲಿ ಇಂಗ್ಲಿಷ್‌ ಅಧ್ಯಾಪಕನ ಪಾತ್ರ ನಿರ್ವಹಿಸಿದ್ದೇನೆ. ಇತ್ತೀಚಿನ ದಿನಗಳಲ್ಲಿ ಇಂಗ್ಲಿಷ್‌ ಭಾಷೆ ವ್ಯಾಪ್ತಿ ಹೆಚ್ಚುತ್ತಿದೆ. ಇದರ ನಡುವೆ ಮಾತೃ ಭಾಷೆಗೆ ಪೆಟ್ಟು ಬೀಳಬಾರದು. ಈ ತಾತ್ಪರ್ಯ ಚಲನಚಿತ್ರದಲ್ಲಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಅನಂತ್‌ನಾಗ್‌ ಅವರ ಪತ್ನಿ ಗಾಯತ್ರಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next