Advertisement

ತ್ಯಾವರೆಕೊಪ್ಪದಲ್ಲಿ ಸಿಂಹದೊಂದಿಗೆ ಕಾಳಗ; ಸಿಂಹಿಣಿ ಮಾನ್ಯ ಸಾವು

01:33 PM Feb 01, 2022 | Team Udayavani |

ಶಿವಮೊಗ್ಗ: ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದ ಸಿಂಹಿಣಿ ಹನ್ನೊಂದು ವರ್ಷದ ಮಾನ್ಯ ಸೋಮವಾರ ರಾತ್ರಿ ಸಾವನ್ನಪ್ಪಿದೆ. ಒಂದು ವಾರದ ಹಿಂದೆ ಯಶವಂತ್ ಎಂಬ ಸಿಂಹದ ಜೊತೆ ಕಾದಾಟ ನಡೆಸಿ ಮಾನ್ಯ ಗಂಭೀರವಾಗಿ ಗಾಯಗೊಂಡಿತ್ತು.

Advertisement

ಸಿಂಹಧಾಮದ ವೈದ್ಯರು ಮಾನ್ಯಗೆ ನಿರಂತರ ಚಿಕಿತ್ಸೆ ನೀಡಿ ಆರೈಕೆ ಮಾಡುತ್ತಿದ್ದರು. ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದೆ. ತ್ಯಾವರೆಕೊಪ್ಪ ಸಿಂಹಧಾಮದ ಸಿಬ್ಬಂದಿಗಳು ಕಾನೂನು ಪ್ರಕಾರ ಅಂತಿಮ‌ ಸಂಸ್ಕಾರ ನಡೆಸಿದ್ದಾರೆ.

ಸಿಂಹಧಾಮದಲ್ಲಿ ಆರು ಸಿಂಹಗಳಿದ್ದವು. ಆದರೆ ಮಾನ್ಯ ಮೃತಪಟ್ಟಿದ್ದರಿಂದ ಸಂಖ್ಯೆ ಐದಕ್ಕಿಳಿದಿದೆ.

Advertisement

Udayavani is now on Telegram. Click here to join our channel and stay updated with the latest news.

Next