Advertisement

Bangalore: ತೆಲುಗು ನಟರ ಅಭಿಮಾನಿಗಳ ಮಧ್ಯೆ ಮಾರಾಮಾರಿ

10:30 AM Mar 12, 2024 | Team Udayavani |

ಬೆಂಗಳೂರು: ತೆಲುಗು ನಟರಾದ ಪ್ರಭಾಸ್‌ ಹಾಗೂ ಅಲ್ಲು ಅರ್ಜುನ್‌ ಅಭಿಮಾನಿಗಳ ನಡುವೆ ಕೆ.ಆರ್‌.ಪುರದ ಕ್ರಿಕೆಟ್‌ ಮೈದಾನದಲ್ಲಿ ಮಾರಾಮಾರಿ ನಡೆದಿದ್ದು, ಯುವಕನ ಮೇಲೆ ಆರೇಳು ಮಂದಿಯ ಗುಂಪು ಹಲ್ಲೆ ಮಾಡುತ್ತಿರುವ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆಹಿಡಿದ ಸ್ಥಳೀಯರೊಬ್ಬರು ಅದನ್ನು ನಗರ ಪೊಲೀಸರ ಸಾಮಾಜಿಕ ಜಾಲತಾಣ ಎಕ್ಸ್‌ ಖಾತೆಗೆ ಟ್ಯಾಗ್‌ ಮಾಡಿದ್ದಾರೆ.

Advertisement

ಕೆ.ಆರ್‌.ಪುರ ಪೊಲೀಸ್‌ ಠಾಣಾ ವ್ಯಾಪ್ತಿಯ ಮೇಡಹಳ್ಳಿಯ ಆಟದ ಮೈದಾನದಲ್ಲಿ ಭಾನುವಾರ ಘಟನೆ ನಡೆದಿದ್ದು, ಕೆ.ಆರ್‌.ಪುರ ಪೊಲೀಸರಿಗೆ ವಿಷಯ ತಿಳಿಯುತ್ತಿದ್ದಂತೆ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ ಮಾಹಿತಿ ಆಧರಿಸಿ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಕ್ರಿಕೆಟ್‌ ಆಡುವಾಗ ತೆಲುಗು ನಟ ಪ್ರಭಾಸ್‌ ಅಭಿಮಾನಿ ಹಾಗೂ ಅಲ್ಲು ಅರ್ಜುನ್‌ ಅಭಿಮಾನಿಗಳ ನಡುವೆ ತಮ್ಮ ನೆಚ್ಚಿನ ನಾಯಕನ ಬಗ್ಗೆ ಕೀಳಾಗಿ ಮಾತನಾಡಿದ್ದಕ್ಕೆ ಜಗಳ ನಡೆದಿತ್ತು. ನೋಡು ನೋಡುತ್ತಿದ್ದಂತೆ ಯುವಕನ ಮೇಲೆ ಆರೇಳು ಜನರ ಗುಂಪು ಕೈಯಿಂದ ಹಲ್ಲೆ ನಡೆಸಿದೆ.

ಯುವಕನಿಗೆ ಹೊಡೆಯುವುದು, ಬೆದರಿಸಿರುವುದು ಮತ್ತು ತಮ್ಮ ನೆಚ್ಚಿನ ನಟನಿಗೆ ಜೈಕಾರ ಹಾಕುವುದು ವಿಡಿಯೋದಲ್ಲಿ ಸೆರೆಯಾ ಗಿದೆ. ಹಲ್ಲೆಗೊಳಗಾದ ಯುವಕನನ್ನು ಪೊಲೀಸರು ಸಂಪರ್ಕಿಸಿದಾಗ, “ಪರಿಚಿತ ಹುಡುಗರೊಂದಿಗೆ ಜಗಳವಾಗಿದ್ದು, ಪ್ರಕರಣದಲ್ಲಿ ಬಳಿಕ ರಾಜಿಯಾಗಿದ್ದೇವೆ. ಹೀಗಾಗಿ ದೂರು ನೀಡುವುದಿಲ್ಲ ಎಂದು ಹೇಳಿದ್ದಾರೆ ಎಂದು ತಿಳಿದು ಬಂದಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next