Advertisement

ಉಗ್ರವಾದ: ಹೋರಾಟ

01:14 AM Apr 21, 2019 | mahesh |

ನಾಗ್ಪುರ: ರಾಷ್ಟ್ರೀಯ ಸ್ವಯಂ ಸೇವಕ ಸಂಘವು (ಆರ್‌ಎಸ್‌ಎಸ್‌) ದೇಶ ವಿರೋಧಿ ಶಕ್ತಿಗಳಾದ ಭಯೋ ತ್ಪಾದನೆ, ಮತಾಂಧತೆಯನ್ನು ತೊಲಗಿಸುವ ತನ್ನ ಕಾಯಕದಲ್ಲಿ ಮುಂದುವರಿಯಲಿದೆ ಎಂದು ಆರ್‌ಎಸ್‌ಎಸ್‌ನ ಮುಖ್ಯಸ್ಥ ಮೋಹನ್‌ ಭಾಗವತ್‌ ತಿಳಿಸಿದ್ದಾರೆ. ಎ. 9ರಂದು ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕರಿಂದ ಹತ್ಯೆಗೀಡಾದ ಆರ್‌ಎಸ್‌ಎಸ್‌ ನಾಯಕ ಚಂದ್ರಕಾಂತ್‌ ಶರ್ಮಾ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ನಿಮಿತ್ತ ತಾವು ಮಾಡಿರುವ ಟ್ವೀಟ್‌ನಲ್ಲಿ ಭಾಗವತ್‌ ಈ ವಿಷಯ ಉಲ್ಲೇಖೀಸಿದ್ದಾರೆ. “ಶರ್ಮಾ ಅವರ ಸಾವು ನೋವು ತಂದಿದೆಯಾದರೂ, ಅವರ ಬಲಿದಾನ ಸಂಘದಲ್ಲಿ ಸ್ಫೂರ್ತಿ ತುಂಬಿದೆ’ ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next