Advertisement

ತುಮಕೂರಿನಲ್ಲಿ ಭೀಕರ ಅಪಘಾತ: ಮೂವರು ಯುವಕರ ದುರ್ಮರಣ 

05:22 PM Mar 04, 2018 | Team Udayavani |

ತುಮಕೂರು: ಇಲ್ಲಿನ ಕ್ಯಾತ್ಸಂದ್ರ ಬಳಿಯ ಬೆಳಗುಂಬದಲ್ಲಿ  ಖಾಸಗಿ ಬಸ್ಸೊಂದು ಢಿಕ್ಕಿಯಾದ ಪರಿಣಾಮ ಆಟೋದಲ್ಲಿದ್ದ  ಮೂವರು ಯುವಕರು ದಾರುಣವಾಗಿ ಸಾವನ್ನಪ್ಪಿದ್ದು ಇನ್ನೋರ್ವ ಗಂಭೀರವಾಗಿ ಗಾಯಗೊಂಡ ಭೀಕರ ಅವಘಡ ಭಾನುವಾರ ನಡೆದಿದೆ. 

Advertisement

ವರದಿಯಾದಂತೆ ದೇವರಾಯನದುರ್ಗದಿಂದ  ಬರುತ್ತಿದ್ದ ಆಟೋಗೆ ಬಸ್‌ ಹಿಂಬದಿಯಿಂದ ಢಿಕ್ಕಿ ಯಾಗಿ ಅವಘಡ ಸಂಭವಿಸಿದ್ದು , ಏಕಾಏಕಿ ಆಟೋ ಬ್ರೇಕ್‌ ಹಾಕಿದ್ದರಿಂದ ಅವಘಡ ಸಂಭವಿಸಿದೆ ಎಂದು ಹೇಳಲಾಗಿದೆ. 

ಮೃತರು ತುಮಕೂರಿನ ಸದಾಶಿವ ನಗರದ ನಿವಾಸಿಗಳೆಂದು ತಿಳಿದು ಬಂದಿದ್ದು, 
ಮಾರುತಿ(16) ನಾಗೇಶ್‌ (20) ಮತ್ತು ಫ‌ಹಾದತ್‌ ಖಾನ್‌(30) ಎಂದು ತಿಳಿದು ಬಂದಿದೆ. ಗಾಯಾಳು ವಸಂತ್‌ ಸ್ಥಿತಿ ಚಿಂತಾಜನಕವಾಗಿದ್ದು ತುಮಕೂರು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. 
  
ಕ್ಯಾತ್ಸಂದ್ರ  ಪೊಲೀಸ್‌ ಠಾಣಾ ವ್ಯಾಪ್ತಿ ಯಲ್ಲಿ ಪ್ರಕರಣ ದಾಖಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next