Advertisement

ಜನರು ರಾಜ್ಯದ ನೀರು ಬಳಸುವುದಕ್ಕೆ ಒಕ್ಕೂಟ ವ್ಯವಸ್ಥೆ ಅಡ್ಡಿ : ಸಿಎಂ ಕುಮಾರಸ್ವಾಮಿ

11:51 AM Jun 19, 2019 | Team Udayavani |

ಬೆಂಗಳೂರು : ‘ಕರ್ನಾಟಕ ಆಂಶಿಕವಾಗಿ ಬರ ಪೀಡಿತವಾಗಿದೆ. ಹಾಗಿದ್ದರೂ ರಾಜ್ಯದ ಜನರಿಗೆ ಇಲ್ಲಿನ ನೀರನ್ನು ಬಳಸಲು ದೇಶದ ಒಕ್ಕೂಟ ವ್ಯವಸ್ಥೆ ಅಡ್ಡಿಯಾಗಿದೆ’ ಎಂದು ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ.

Advertisement

‘ಕರ್ನಾಟಕದ ಜಲಾಶಯಗಳು ಭರ್ತಿಯಾದರೂ ಜನರಿಗೆ ರಾಜ್ಯದ ನೀರನ್ನು ಉಪಯೋಗಿಸಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ದೇಶದ ಒಕ್ಕೂಟ ವ್ಯವಸ್ಥೆ ಕಾರಣವಾಗಿದೆ. ನಾವು ನಮ್ಮ ನೀರನ್ನು ಬಳಸಲು ಕೋರ್ಟ್‌ ತೀರ್ಪನ್ನು, ಜಲ ನ್ಯಾಯ ಮಂಡಳಿಯ ನಿರ್ದೇಶಗಳನ್ನು ಪಾಲಿಸಬೇಕಾಗುತ್ತದೆ’ ಎಂದು ಸಿಎಂ ಕುಮಾರಸ್ವಾಮಿ ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.

ಮಂಡ್ಯದ ಗ್ರಾಮವೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರೊಬ್ಬರ ಕುಟುಂಬದವರನ್ನು ಭೇಟಿಯಾದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next