Advertisement

ಇಂದಿನ ಗ್ರಹಬಲ: ಈ ರಾಶಿಯವರಿಗಿಂದು ಹಿತಶತ್ರು ಬಾಧೆ ಕಂಡು ಬರಲಿದೆ

07:55 AM Feb 01, 2021 | Team Udayavani |

01-02-2021

Advertisement

ಮೇಷ: ಅನ್ಯ ಕಾರ್ಯ ನಿಮಿತ್ತ ಸಂಚಾರ ತೋರಿ ಬಂದೀತು. ಆರ್ಥಿಕವಾಗಿ ಹಣವು ನೀರಿನಂತೆ ಸೋರಿ ಹೋಗಲಿದೆ. ಪಾಲು ಪಂಚಾಯತಿಗಾಗಿ ಸೋದರರೊಳಗೆ ಮನಸ್ತಾಪ ಕಂಡುಬಂದೀತು. ನ್ಯಾಯಾಲಯದಲ್ಲಿ ಸೋಲಿನ ಹತಾಶೆ.

ವೃಷಭ: ಕ್ರೀಡಾ ವಿಹಾರಿಗಳಿಗೆ ಸೂಕ್ತ ಪ್ರಾತಿನಿಧ್ಯ ದೊರಕಿ ಯಶಸ್ಸಿನ ಹಾದಿ ಸುಗಮವಾದೀತು. ಧಾರ್ಮಿಕ ಕಾರ್ಯಗಳು, ದೇವತಾ ಕಾರ್ಯಗಳು ನಡೆದು ಸಂತಸ ತರಲಿದೆ. ಗೃಹಾಲಂಕಾರ ವಸ್ತುಗಳಿಂದ ಮನೆಯ ಅಂದ ಹೆಚ್ಚಲಿದೆ.

ಮಿಥುನ:ಆಗಾಗ ಆರೋಗ್ಯಭಾಗ್ಯವು ಕೆಡಲಿದೆ. ಜಾಗ್ರತೆ ಇರಲಿ. ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಯಲ್ಲಿ ಪ್ರೇಮ ಪ್ರಸಂಗ ಒಂದು ತಳಕು ಹಾಕಲಿದೆ. ಸೂಕ್ತ ನಿರ್ಧಾರದಿಂದ ಶ್ರೇಯಸ್ಸಿದೆ. ಸರಕಾರೀ ಉದ್ಯೋಗದವರಿಗೆ ಮುಂಭಡ್ತಿ ಯೋಗ.

ಕರ್ಕ: ಅನಿರೀಕ್ಷಿತ ಆದಾಯದ ಮೂಲವೊಂದು ಕಂಡುಬರಲಿದೆ. ಉಚ್ಚ ವ್ಯಾಸಂಗಕ್ಕಾಗಿ ವಿದ್ಯಾರ್ಥಿಗಳಿಗೆ ವಿದ್ಯಾ ಯಾನ ಸಂಭವವಿದೆ. ಮೂಲ ಆಸಿ ಪಾಸ್ತಿಗಾಗಿ ಕೋರ್ಟಿಗೆ ಹೋಗಬೇಕಾದೀತು. ತೋಟದ ಬೆಳೆಯಿಂದ ಲಾಭವಿದೆ.

Advertisement

ಸಿಂಹ: ಸ್ಥಗಿತಗೊಂಡ ಕೆಲಸಕಾರ್ಯಗಳು ಪುನರಾರಂಭಗೊಳ್ಳಲಿವೆ. ಸಾಂಸಾರಿಕವಾಗಿ ಬಂಧುಮಿತ್ರರ ಸಹಕಾರ ಸಿಗಲಿದೆ. ದೇವತಾ ಕಾರ್ಯ, ಮಂಗಲಮಯ ವಾತಾವರಣ ಸೃಷ್ಟಿಸಿಲಿದೆ. ಹಿತಶತ್ರು ಬಾಧೆ ಕಂಡು ಬರಲಿದೆ.

ಕನ್ಯಾ: ಕೆಲಸ ಕಾರ್ಯಗಳಲ್ಲಿ ಆಶಾಭಂಗವಾದೀತು. ಜನ ಮೆಚ್ಚುವ ಕೆಲಸದಿಂದ ಪ್ರಶಂಸೆ ದೊರಕಲಿದೆ. ನಿರಂತರ ಆದಾಯದಿಂದ ಕಾರ್ಯಸಾಧನೆಯಾದೀತು. ರಾಜಕೀಯದವರಿಗೆ ಸ್ಥಾನಮಾನವು ಲಭಿಸಿ ಸಂತೋಷ.

ತುಲಾ: ಆದಾಯ, ತೆರಿಗೆಗಳ ಸಮಸ್ಯೆಯು ಹೆಚ್ಚಲಿದೆ. ಗೃಹಿಣಿಗೆ ಉದರವ್ಯಾಧಿ ಕಂಡು ಬಂದೀತು. ತೋಟಗಾರಿಕೆ ಗಾಗಿ ಹಣ ಹೂಡಿಕೆ ಅಥವಾ ಷೇರು ಮಾರ್ಕೆಟ್‌ನಲ್ಲಿ ಸಂಪತ್ತು ಚಲಾವಣೆಯಾದೀತು. ಮಿತ್ರರಿಂದ ಹರುಷ.

ವೃಶ್ಚಿಕ: ಮದುವೆ ಸಂಬಂಧಿ ಪ್ರಸ್ತಾವಗಳು ಬಂದಾವು. ಕಾರ್ಯರಂಗದಲ್ಲಿ ನೂತನ ಕಾರ್ಯನಿರ್ವಹಣ ಜವಾಬಾœರಿ ಹೆಚ್ಚಲಿದೆ. ಬಂಧುಗಳ ಆಗಮನದಿಂದ ಮನೆಯಲ್ಲಿ ಹರುಷವಿದೆ. ಆರೋಗ್ಯ ಜಾಗ್ರತೆ.

ಧನು: ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಉದಾಸೀನತೆ ಕಂಡು ಬಂದೀತು. ಬರಲೇಬೇಕಾದ ಹಣವು ತೊಂದರೆ ಕೊಟ್ಟಿàತು. ಹಲವು ಸಮಯದಿಂದ ಕಾದಿದ್ದ ಕೆಲಸವು ಈಗ ನೆರವೇರಲಿದೆ. ಒಂದೊಂದಾಗಿ ಆಸೆಗಳು ಈಡೇರಲಿರುವುವು.

ಮಕರ: ವಿದ್ಯಾಭ್ಯಾಸದಲ್ಲಿ ನಿಮ್ಮ ಎಣಿಕೆಯಂತೆ ಪ್ರಗತಿ ಕಂಡು ಬಾರದು. ಆರೋಗ್ಯವು ಕೊಂಚ ಕೈಕೊಟ್ಟರೂ ನಿಧಾನವಾಗಿ ಸರಿಯಾಗಲಿದೆ. ವೃತ್ತಿಯಲ್ಲಿ ಕ್ಷೇಶ ಹೆಚ್ಚು. ಕಾರ್ಯಕ್ಷೇತ್ರದಲ್ಲಿ ಹೆಚ್ಚಿನ ಪ್ರಗತಿಯು ಕಂಡು ಬಾರದು.

ಕುಂಭ: ನಿಮ್ಮ ಪಾಲಿಗೆ ಸುಖ- ದುಃಖ, ಶುಭಾಶುಭ, ಲಾಭ- ನಷ್ಟಗಳ ಸಮ್ಮಿಶ್ರಣವೆನಿಸಲಿದೆ. ಆರೋಗ್ಯದಲ್ಲಿ ಸುಧಾರಣೆ ಕಂಡು ಬರುವುದು. ಉದರವ್ಯಾಧಿ, ಪಿತ್ತಪ್ರಕೋಪಗಳು ಕಂಡು ಬರುವುವು. ಮನದನ್ನೆಯ ಮಾತಿನಿಂದ ಹಿತ.

ಮೀನ: ಹಿರಿಯರ ಬುದ್ಧಿಮಾತು ಕೇಳಲು ನಿಮಗೆ ಮನಸ್ಸು ಇಲ್ಲದಿರಬಹುದು. ಆದರೂ ಧನಾಭಿವೃದ್ಧಿ ಇರುತ್ತದೆ. ವ್ಯವಹಾರ ಸರಿದೂಗಿಸಲು ಹಣದ ಮುಗ್ಗಟ್ಟು ಕಂಡು ಬರುವುದು. ಮಕ್ಕಳಿಗೆ ಪ್ರವಾಸದಿಂದ ಸಂತಸ.

ಎನ್‌.ಎಸ್‌. ಭಟ್‌

Advertisement

Udayavani is now on Telegram. Click here to join our channel and stay updated with the latest news.

Next