Advertisement

2005ರಲ್ಲಿ ಹೆದರಿಕೆಯಿತ್ತು, ಈಗ ಭರವಸೆಯಿದೆ: ಮಿಥಾಲಿ

07:05 AM Jul 23, 2017 | |

ನವದೆಹಲಿ: 2005ರ ವಿಶ್ವಕಪ್‌ ಫೈನಲ್‌ಗ‌ೂ ಈಗಿನ ವಿಶ್ವಕಪ್‌ ತುಂಬಾ ವ್ಯತ್ಯಾಸವಿದೆ. ಆಗ ನನಗೆ ಅನುಭವದ ಕೊರತೆ ಇತ್ತು. ಆದರೆ ಈಗ ಅಂತಹ ಸಮಸ್ಯೆ ಇಲ್ಲ. ತಂಡವನ್ನು ಮುನ್ನಡೆಸಿರುವುದರಲ್ಲಿ ಅನುಭವವಿದೆ. 

Advertisement

ಹೀಗಾಗಿ ಗೆಲುವಿನ ವಿಶ್ವಾಸವಿದೆ ಎಂದು ಭಾರತ ತಂಡದ ನಾಯಕಿ ಮಿಥಾಲಿ ರಾಜ್‌ ತಿಳಿಸಿದ್ದಾರೆ. 2005ರಲ್ಲಿ ಅನುಭವದ ಕೊರತೆಯಿಂದ ಆತ್ಮವಿಶ್ವಾಸದ ಕೊರತೆ ಇತ್ತು. ಅಂದು ವಿಶ್ವಕಪ್‌ಗ್ೂ ಮುನ್ನ ಸಿಕ್ಕ ಸೌಲಭ್ಯದ ವ್ಯವಸ್ಥೆಯೂ ಅಷ್ಟಕ್ಕೆ ಅಷ್ಟೆ ಆಗಿತ್ತು. ಆದರೆ ಪ್ರಸಕ್ತ ಕೂಟದಲ್ಲಿ ಲೀಗ್‌ ಮತ್ತು ಸೆಮಿಫೈನಲ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಫೈನಲ್‌ ಪ್ರವೇಶಿಸಿದ್ದೇವೆ. ತಂಡದಲ್ಲಿ ಯುವ ಆಟಗಾರ್ತಿಯರು ಭರ್ಜರಿ ಪ್ರದರ್ಶನ ನೀಡುತ್ತಿದ್ದಾರೆ. ಸಂಘಟನಾತ್ಮಕ ಹೋರಾಟವೇ ನಮ್ಮ ಪ್ರಬಲ ಶಕ್ತಿಯಾಗಿದೆ. ಗೆಲ್ಲುವ ಛಲವಿದೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next