Advertisement

ದೇಶವನ್ನು ಕಾಡುತ್ತಿದೆ ಲಕ್ಷಣರಹಿತ ಸೋಂಕಿನ ಭೀತಿ

12:17 AM Apr 21, 2020 | Sriram |

ಹೊಸದಿಲ್ಲಿ: ಕೋವಿಡ್-19 ವಿರುದ್ಧ ದೇಶವು ಯಶಸ್ವಿಯಾಗಿ ಹೋರಾಡುತ್ತಿರುವ ನಡುವೆಯೇ ಹೊಸ ತಲೆನೋವೊಂದು ಆರಂಭ ವಾಗಿದೆ. ಕೋವಿಡ್-19 ಸೋಂಕಿನ ಲಕ್ಷಣಗಳು ಎಂದು ಯಾವುದನ್ನು ವೈದ್ಯರು ಗುರುತಿಸು ತ್ತಿದ್ದಾರೆಯೋ ಅವೇ ಇಲ್ಲದ ಸೋಂಕು ಪೀಡಿತರು ಪತ್ತೆ ಯಾಗುತ್ತಿರುವುದೇ ಈ ಹೊಸ ತಲೆಶೂಲೆ!

Advertisement

ದೇಶದ ಒಟ್ಟಾರೆ ಸೋಂಕುಪೀಡಿತರ ಪೈಕಿ ಶೇ.80ರಷ್ಟು ಮಂದಿಗೆ ಕೋವಿಡ್-19 ರೋಗದ ಯಾವುದೇ ಲಕ್ಷಣ ಕಂಡುಬಂದಿಲ್ಲ ಎಂಬ ಮಾಹಿತಿ ಬಹಿರಂಗವಾಗಿದ್ದು, ಆತಂಕಕ್ಕೆ ಕಾರಣವಾಗಿದೆ. ಸೋಂಕಿನ ಮೌನ ವಾಹಕರು ಎಂದು ಗುರುತಿಸಬಹುದಾದ ಇವರು ತಮಗರಿ ವಿಲ್ಲದಂತೆಯೇ ಇತರರಿಗೂ ಸೋಂಕು ಪ್ರಸಾರ ಮಾಡುತ್ತ ಸಾಗುತ್ತಿರುವರೇ ಎಂಬ ಆತಂಕವನ್ನು ಇತ್ತೀಚೆಗೆ ಕೆಲವು ತಜ್ಞರು ವ್ಯಕ್ತಪಡಿಸಿದ್ದರು. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಮೃತಪಟ್ಟ ಮಹಿಳೆಯ ಸಹಿತ ಹಲವು ಪ್ರಕರಣಗಳ ಬಳಿಕ ಈಗ ಅದು ನಿಜವಾಗಿರುವಂತೆ ತೋರುತ್ತಿದೆ. ಈಕೆಯ 23 ವರ್ಷದ ಪುತ್ರ ವಿದೇಶದಿಂದ ಬಂದವರಾಗಿದ್ದರೂ ಅವರಿಗೆ ರೋಗಲಕ್ಷಣ ಕಂಡುಬಂದಿಲ್ಲ. ಉಪ್ಪಿನಂಗಡಿ ಪ್ರಕರಣದಲ್ಲಿಯೂ ದಿಲ್ಲಿ ಪ್ರವಾಸ ಕೈಗೊಂಡಿದ್ದ ಮಧ್ಯವಯಸ್ಕ ವಕೀಲರಿಗೆ ಆರಂಭಿಕ ಪರೀಕ್ಷೆಯಲ್ಲಿ ಕೋವಿಡ್-19 ನೆಗೆಟಿವ್‌ ಆಗಿತ್ತು.

ಕರ್ನಾಟಕದ ಶೇ.50 ಪ್ರಕರಣಗಳ ಸಹಿತ 10 ಪ್ರಮುಖ ರಾಜ್ಯಗಳ 3ನೇ 2ರಷ್ಟು ಸೋಂಕು ಪೀಡಿತರಲ್ಲಿ ರೋಗ ಲಕ್ಷಣವೇ ಕಂಡುಬಂದಿಲ್ಲ ಎಂದು ಸ್ವತಃ ಭಾರತೀಯ ವೈದ್ಯಕೀಯ ಸಂಶೋಧನ ಮಂಡಳಿ (ಐಸಿಎಂಆರ್‌)ಯ ವಿಜ್ಞಾನಿ ಡಾ| ರಮಣ್‌ ಆರ್‌. ಗಂಗಾಖೇಡ್ಕರ್‌ ತಿಳಿಸಿದ್ದಾರೆ. ಇಂಥವ ಪತ್ತೆ ಸವಾಲಾಗಿದ್ದು, ಸೋಂಕುಪೀಡಿತ ವ್ಯಕ್ತಿಗಳ ಸಂಪರ್ಕ ಹೊಂದಿ ದವರನ್ನು ಕ್ಷಿಪ್ರಗತಿಯಲ್ಲಿ ಕಂಡುಹಿಡಿದು ಪರೀಕ್ಷೆ ಗೊಳಪಡಿಸುವುದೇ ಏಕೈಕ ದಾರಿ ಎಂದಿದ್ದಾರೆ.

ಲಕ್ಷಣರಹಿತರು 45ರ ಒಳಗಿನವರು
ರಾಜೀವ್‌ ಗಾಂಧಿ ಎದೆರೋಗಗಳ ಆಸ್ಪತ್ರೆಯ ನಿರ್ದೇಶಕ ಡಾ| ಸಿ.ನಾಗರಾಜ್‌ ಪ್ರಕಾರ, ಉತ್ತಮ ರೋಗ ನಿರೋಧಕ ಶಕ್ತಿ ಇರುವ ಯುವ ಜನರಲ್ಲಿ ಹೆಚ್ಚಾಗಿ ಕೋವಿಡ್-19 ಸೋಂಕಿನ ಲಕ್ಷಣ ಕಂಡುಬರುವುದಿಲ್ಲ. ಅಲ್ಲದೆ, ಲಕ್ಷಣ ರಹಿತ ರೋಗಿಗಳು ಬಹುತೇಕ 20ರಿಂದ 45ರೊಳಗಿನ ವಯೋಮಾನದವರಾಗಿರುತ್ತಾರೆ. ಕೆಲವರು ಇದಕ್ಕಿಂತ ಹೆಚ್ಚು ವಯಸ್ಕರಾಗಿದ್ದರೂ ಕೆಲವು ನಿರ್ದಿಷ್ಟ ಔಷಧಗಳನ್ನು ಸೇವಿಸುವವರಾಗಿದ್ದರೆ, ಅಂಥ ವರಲ್ಲೂ ರೋಗ ಲಕ್ಷಣ ಕಂಡುಬಾರದು.

53 ಪತ್ರಕರ್ತರಿಗೆ ಸೋಂಕು
ಮಹಾರಾಷ್ಟ್ರದಲ್ಲಿ 53 ಪತ್ರಕರ್ತರಿಗೆ ಸೋಂಕು ತಗಲಿದೆ. ವಿಚಿತ್ರವೆಂದರೆ,ಇವರಲ್ಲಿ ಯಾರಿಗೂ ರೋಗ ಲಕ್ಷಣ ಕಾಣಿ ಸಿರಲಿಲ್ಲ.ದಿಢೀರನೇ ಪರೀಕ್ಷೆ ನಡೆಸಿದಾಗ ಇದು ಬಯ ಲಾಗಿದೆ. ಇದೂ ಆತಂಕಕ್ಕೆ ಕಾರಣವಾಗಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next